Advertisement

Puttur; ಹಲ್ಲೆ, ಜೀವ ಬೆದರಿಕೆ: ದೂರು ದಾಖಲು

01:26 AM Mar 16, 2024 | Team Udayavani |

ಪುತ್ತೂರು: ತೋಟದ ಲ್ಲಿದ್ದ ಮಹಿಳೆಯೊಬ್ಬರಿಗೆ ಪಕ್ಕದ ತೋಟದ ವ್ಯಕ್ತಿಯೊಬ್ಬರು ತೆಂಗಿನ ಮರದ ವಿಚಾರದಲ್ಲಿ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಮಾ. 13ರಂದು ಸಾಮೆತ್ತಡ್ಕದಲ್ಲಿ ನಡೆದಿದೆ.

Advertisement

ಸಾಮೆತ್ತಡ್ಕ ನಿವಾಸಿ ಸಂತ್ರಸ್ತ ಮಹಿಳೆ ನೀಡಿರುವ ದೂರಿನಲ್ಲಿ, “ತನ್ನ ತಂದೆಯ ಮರಣಾನಂತರ ಅವರ ಅಡಿಕೆ ಮತ್ತು ತೆಂಗಿನ ತೋಟವನ್ನು ನೋಡಿಕೊಳ್ಳುತ್ತಿದ್ದು, ಮಾ. 13ರಂದು ಸಂಜೆ ಸಹೋದರ ಮುಹಮ್ಮದ್‌ ಮುಸ್ತಾಫ ಅವರೊಂದಿಗೆ ತೋಟಕ್ಕೆ ಹೋಗಿದ್ದ ಸಮಯ ನೌಫಲ್‌ ಮೂಲಕ ತೆಂಗಿನ ಮರದಿಂದ ಎಳನೀರು ಮತ್ತು ತೆಂಗಿನ ಕಾಯಿ ತೆಗೆಸುತ್ತಿದ್ದು, ಈ ವೇಳೆ ಪಕ್ಕದ ತೋಟದ ಎಂ.ಕೆ. ಉಮ್ಮರ್‌ಎಂಬವರು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ’ ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next