Advertisement

ಅಮರೇಶ್ವರ ನಾಯಕ ವಿರುದ್ಧ ಸುಳ್ಳು ಜಾತಿ ಪ್ರಮಾಣಪತ್ರ ದೂರು ದಾಖಲು

12:19 AM Apr 06, 2024 | Team Udayavani |

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಶಾಲಾ ದಾಖಲೆಗಳಲ್ಲಿ ಹಿಂದೂ ಕ್ಷತ್ರಿಯ ಎಂದು ನಮೂದಿಸಿದ್ದು, ಪರಿಶಿಷ್ಟ ಪಂಗಡ ಮೀಸಲಾತಿಯಡಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆಸ್ಪರ್ಧಿಸಿದ್ದಾರೆ ಎಂದು ಲಿಂಗಸುಗೂರು ತಹಶೀಲ್ದಾರ್‌ಗೆ ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮದ ನರಸಿಂಹ ನಾಯಕ ದೂರು ನೀಡಿದ್ದಾರೆ.

Advertisement

ರಾಜಾ ಅಮರೇಶ್ವರ ನಾಯಕ ಶಾಲಾ ದಾಖಲೆಗಳಲ್ಲಿ ಹಿಂದೂ ಕ್ಷತ್ರಿಯ ಎಂದು ದಾಖಲಿಸಿದ್ದು, ಪರಿಶಿಷ್ಟ ಪಂಗಡದಲ್ಲಿ ಕ್ಷತ್ರಿಯ ಎಂಬ ಉಪಜಾತಿ ಇಲ್ಲ. ಹೀಗಾಗಿ ಅವರು ಎಸ್‌ಟಿ ಮೀಸಲಾತಿ ಸೌಲಭ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ರಾಜಾ ಅಮರೇಶ್ವರ ನಾಯಕ, ಚುನಾವಣೆ ಮುನ್ನ ಇಂಥ ಆರೋಪಗಳು ಬರುವುದು ಸಹಜ. ಹಿಂದೆಯೂ ಇಂಥ ಆರೋಪಗಳು ಬಂದಾಗ ಆಡಳಿತ, ನ್ಯಾಯಾಲಯ ತಳ್ಳಿ ಹಾಕಿದೆ ಎಂದಿದ್ದಾರೆ.

ಅವರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ, ಒಂದು ಅವಧಿಗೆ ಸಂಸದರೂ ಆಗಿದ್ದರು. ಹಿಂದೆಯೂ ಅವರ ವಿರುದ್ಧ ಜಾತಿ ಪ್ರಮಾಣಪತ್ರ ದುರ್ಬಳಕೆ ದೂರು ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next