Advertisement

ಕೌಟುಂಬಿಕ ಕಲಹ: ದೂರು-ಪ್ರತಿದೂರು ದಾಖಲು

01:03 AM Apr 02, 2024 | Team Udayavani |

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಕರ್ನಂತೊಡಿ ಎಂಬಲ್ಲಿ ಪತಿ ರಾತ್ರಿ ಮನೆಗೆ ಬಂದಾಗ ಪತ್ನಿ ತಡವಾಗಿ ಬಾಗಿಲು ತೆಗೆದ ವಿಚಾರವಾಗಿ ಪತಿ ಹಲ್ಲೆ ಮಾಡಿದರೆಂದು ದೂರು ದಾಖಲಾಗಿದ್ದು, ಮತ್ತೂಂದೆಡೆ ಮನೆಯಲ್ಲಿದ್ದ ವ್ಯಕ್ತಿಗೆ ಪತ್ನಿ ಮನೆಯವರು ಹಲ್ಲೆ ನಡೆಸಿರುವ ವಿಚಾರವಾಗಿ ಪತಿ ಠಾಣೆಗೆ ದೂರು ನೀಡಿದ ಘಟನೆ ಮಾ. 30ರಂದು ನಡೆದಿದೆ.

Advertisement

ಓಡಿಲಾ°ಳ ಗ್ರಾಮದ ರಾಘವೇಂದ್ರ ಗೌಡ (40) ಅವರು ಪತ್ನಿಯೊಂದಿಗೆ ಕನ್ಯಾಡಿಯಲ್ಲಿ ನಡೆದ ಗೃಹ ಪ್ರವೇಶಕ್ಕೆ ತೆರಳಿದ್ದು, ಅಲ್ಲಿ ಪತ್ನಿಯ ಸಂಬಂಧಿ ಆತ್ಮೀಯತೆಯಿಂದ ಮಾತನಾಡಿಸಿದ್ದರು. ಬಳಿಕ ಅಲ್ಲಿಂದ ಪತಿ ಸಂಬಂಧಿಕರ ಮನೆಗೆ ದೈವದ ಕಾರ್ಯಕ್ರಮಕ್ಕೆ ತೆರಳಿ ವಾಪಸು ರಾತ್ರಿ ಸುಮಾರು 12.30ಕ್ಕೆ ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲು ತೆರೆಯಲು ತಡವಾಗಿರುವ ವಿಚಾರವಾಗಿ ಪತ್ನಿ ಜತೆ ಜಗಳವಾಡಿದ್ದಾರೆ.

ಅನಂತರ ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಅಣ್ಣನಿಗೆ ತಿಳಿಸಿದ್ದರು. ಅದರಂತೆ ಅಣ್ಣ ರಾತ್ರಿ ಅವರ ತಂದೆ ಮತ್ತು ಇತರರ ಜತೆಯಲ್ಲಿ ಬಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಕರೆದುಕೊಂಡು ಹೋಗುವಾಗ ಜಗಳವಾಡಿದ್ದಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತಿಯಿಂದ ಪ್ರತಿದೂರು
ಈ ವಿಚಾರವಾಗಿ ಪತಿ ರಾಘವೇಂದ್ರ ಗೌಡ ಅವರು ಸಂಬಂಧಿಕರ ಮನೆಯ ದೈವದ ಕಾರ್ಯಕ್ರಮದಿಂದ ರಾತ್ರಿ ಬಂದು ಬಾಗಿಲು ತೆಗೆಯುವ ವಿಚಾರದಲ್ಲಿ ಪತ್ನಿ ಜತೆ ಜಗಳವಾಗಿದ್ದು ಈ ವೇಳೆ ಬಾಗಿಲನ್ನು ದೂಡಿದ ಪರಿಣಾಮ ಬಾಗಿಲು ಪತ್ನಿಯ ಹಣೆಗೆ ತಾಗಿ ಗಾಯವಾಗಿದೆ. ಮಾರನೇ ದಿನ ಬೆಳಗ್ಗೆ ಮಾ. 31ರಂದು ಪತ್ನಿ ಮನೆಯವರು ಹಾಗೂ ಇತರರಾದ ಸಂಜೀವ ಗೌಡ, ವಿಜಯ ಗೌಡ, ಹರೀಶ, ಚಂದ್ರಶೇಖರ, ಸದಾನಂದ ರಂಜಿತ್‌, ಶಶಿಧರ ಹಾಗೂ ಇತರರು ಕಾರಿನಲ್ಲಿ ಬಂದು ಏಕಾಏಕಿ ಬೆತ್ತದಲ್ಲಿ ಮತ್ತು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು, ಬಿಡಿಸಲು ಬಂದ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಪತ್ನಿಯನ್ನು ಅವರೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಚಾರವಾಗಿ ರಾಘವೇಂದ್ರ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next