Advertisement

Puttur: ಚಿನ್ನಾಭರಣವಿಟ್ಟ ಪರ್ಸ್ ಕಳವು

10:50 PM Feb 14, 2024 | Team Udayavani |

ಪುತ್ತೂರು: ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಪರ್ಸ್‌ ಕಳವಾದ ಘಟನೆ ಫೆ.12ರಂದು ಮೈಸೂರಿಗೆ ಹೊರಟ ಬಸ್‌ನಲ್ಲಿ ನಡೆದಿದೆ.

Advertisement

ವಿಟ್ಲ ಕಾನತಡ್ಕ ನಿವಾಸಿ ಹರೀಶ್‌ ಅವರ ಪತ್ನಿ ರೇಷ್ಮಾ ಅವರು ಪರ್ಸ್‌ ಕಳೆದುಕೊಂಡವರು. ಮೂಲತಃ ಗುಂಡ್ಲುಪೇಟೆಯವರಾದ ರೇಷ್ಮಾ ಅವರು ಪುತ್ರಿಯೊಂದಿಗೆ ಮೈಸೂರಿಗೆ ತೆರಳುವ ಬಸ್‌ ಹತ್ತಿದ್ದರು. ನಿರ್ವಾಹಕರಿಗೆ ಆಧಾರ್‌ ಕಾರ್ಡ್‌ ತೋರಿಸುವ ಸಂದರ್ಭ ಬ್ಯಾಗ್‌ನ ಒಳಗೆ ಇದ್ದ ಚಿನ್ನಾಭರಣವಿದ್ದ ಸಣ್ಣ ಪರ್ಸ್‌ ಕಳವಾಗಿರುವುದು ಬೆಳಕಿಗೆ ಬಂದಿತ್ತು. ತತ್‌ಕ್ಷಣ ಈ ವಿಚಾರವನ್ನು ನಿರ್ವಾಹಕರ ಗಮನಕ್ಕೆ ತಂದು ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ವಿಚಾರಿಸಲಾಯಿತು.

ಯಾವುದೇ ಪ್ರಯೋಜನವಾಗದೆ ಇದ್ದಾಗ ರೇಷ್ಮಾ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಳವಾದ ಪರ್ಸ್‌ನಲ್ಲಿ ಒಟ್ಟು ಸುಮಾರು 136 ಗ್ರಾಂ ಚಿನ್ನಾಭರಣವಿತ್ತು. ಅಂದಾಜು ಮೌಲ್ಯ 7,94,000 ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next