Advertisement

ಉಡುಪಿ: ಪುತ್ತಿಗೆ ಶ್ರೀಗಳಿಂದ ಅಬುಧಾಬಿ ಸಚಿವರ ಭೇಟಿ

01:36 AM Dec 20, 2022 | Team Udayavani |

ಉಡುಪಿ: ಅಬುಧಾಬಿ ಸರಕಾರದ ಸಮಾಜ ಧರ್ಮ ಸಾಮರಸ್ಯ ಸಚಿವ ಶೇಖ್‌ ನಹ್ಯಾನ್‌ ಬಿನ್‌ ಮುಬಾರಕ್‌ ಅಲ್‌ ನಹ್ಯಾನ್‌ ಅವರನ್ನು ಉಡುಪಿಯ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸೌಹಾರ್ದ ಭೇಟಿ ಮಾಡಿದರು.

Advertisement

ಭೇಟಿ ಸಂದರ್ಭ ಸಮಕಾಲೀನ ಸಮಸ್ಯೆಗಳ ಕುರಿತು ಹಾಗೂ ಸಮಾಜದಲ್ಲಿ ಪರಸ್ಪರ ಶಾಂತಿ-ಸೌಹಾರ್ದವನ್ನು ಗಟ್ಟಿಗೊಳಿಸುವಲ್ಲಿ ಧಾರ್ಮಿಕ ನಾಯಕರು ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಶ್ರೀಪಾದರ ಸಮಾಜಮುಖೀ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಶ್ರೀಗಳು ಸಚಿವರಿಗೆ ವಿವರಿಸಿದರು. ಮುಂಬರುವ ಶ್ರೀಕೃಷ್ಣ ಪೂಜಾ ಪರ್ಯಾಯಕ್ಕೆ ಆಹ್ವಾನಿಸಿದಾಗ, ಒಪ್ಪಿಗೆ ಸೂಚಿಸಿದ ಸಚಿವರು ಶ್ರೀಗಳ ವಿಶ್ವಶಾಂತಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next