Advertisement

ಕರ್ನಾಟಕದಲ್ಲೂ ಬಿಜೆಪಿ ಗೆಲುವು ಪಕ್ಕಾ: ಅಮಿತ್‌ ಶಾ

03:45 AM Mar 13, 2017 | Team Udayavani |

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ದಿಗ್ವಿಜಯವನ್ನು 2014ರ ಲೋಕಸಭೆ ಚುನಾವಣೆಗಿಂತಲೂ ಮಿಗಿಲಾದ ಯಶಸ್ಸು ಎಂದು ವ್ಯಾಖ್ಯಾನಿ ಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, 2019ರ ಚುನಾವಣೆಯಲ್ಲೂ ಜನಾದೇಶ ಬಿಜೆಪಿ ಪರ ಇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Advertisement

ಚುನಾವಣಾ ವಿಜಯದ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಿ ಮೋದಿ ಅವರ ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಶಾ, ಈ ವಿಜಯ ಯಾತ್ರೆ ಮುಂಬರುವ ಕರ್ನಾಟಕ, ಹಿಮಾಚಲ ಪ್ರದೇಶ, ಗುಜರಾತ್‌ ರಾಜ್ಯಗಳ ಚುನಾವಣೆಯಲ್ಲೂ ಮುಂದುವರಿಯಲಿದ್ದು, ದೇಶದ ಪೂರ್ವ ಹಾಗೂ ದಕ್ಷಿಣ ರಾಜ್ಯಗಳನ್ನೂ ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ವಿಜಯವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಡವರ ಪರವಾದ ನೀತಿಗಳಿಗೆ ಸಿಕ್ಕ ಮನ್ನಣೆ ಎಂದಿರುವ ಅಮಿತ್‌ ಶಾ, ಪಂಚ ರಾಜ್ಯಗಳಲ್ಲಿ ಪಕ್ಷಕ್ಕೆ ಲಭಿಸಿರುವುದು ಅಭುತಪೂರ್ವ ಜಯ. ಇದು 2014ರ ಐತಿಹಾಸಿಕ ಗೆಲುವನ್ನು ಮುಂದುವರಿಸಿಕೊಂಡು ಹೋಗುವ ಸೂಚನೆ ಎಂದರು. ಈ ವೇಳೆ ಪಕ್ಷದ ಇತರ ಹಿರಿಯ ಮುಖಂಡರೊಂದಿಗೆ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ ಶಾ, ನೋಟು ಅಮಾನ್ಯ ಕ್ರಮ ದೇಶದ ಜನರನ್ನು ಪಕ್ಷದ ಸನಿಹ ಕರೆತಂದಿದೆ. ಇದು ನರೇಂದ್ರ ಮೋದಿ ಅವರ ಜನಪರ ಆಡಳಿತಕ್ಕೆ ಸಂದ ಗೆಲುವು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next