Advertisement

ಬೆಂಗಳೂರಿನಲ್ಲಿ ‘ಪುಷ್ಪ’ ಪ್ರಚಾರ: ಪುನೀತ್ ಮನೆಗೆ ಭೇಟಿ ನೀಡುತ್ತೇನೆಂದ ಅಲ್ಲು ಅರ್ಜುನ್‌

09:49 AM Dec 16, 2021 | Team Udayavani |

ಮೊನ್ನೆಯಷ್ಟೇ ತೆಲುಗಿನ “ಆರ್‌ಆರ್‌ಆರ್‌’ ತಂಡ ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರ ಕಾರ್ಯಕೈಗೊಂಡಿತ್ತು. ಈಗ “ಪುಷ್ಪ’ ಸರದಿ. ಅಲ್ಲು ಅರ್ಜುನ್‌ ನಟನೆಯ ತೆಲುಗು ಚಿತ್ರ “ಪುಷ್ಪ’ ಡಿ.17ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ “ಪುಷ್ಪ” ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ನಟ ಅಲ್ಲು ಅರ್ಜುನ್‌, ನಟಿ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ್‌ ಚಿತ್ರದ ಬಗ್ಗೆ ಮಾತನಾಡಿದರು.

Advertisement

ಅಲ್ಲು ಅರ್ಜುನ್‌ ಅವರು ಕರ್ನಾಟಕ, ಅದರಲ್ಲೂ ಬೆಂಗಳೂರಿನ ಜನ ತೋರುತ್ತಿರುವ ಪ್ರೀತಿ ಬಗ್ಗೆ ಹೇಳಿಕೊಂಡರು. “ನಾನು ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಆಗ ನನಗೆ ಬೆಂಗಳೂರಿನಲ್ಲಿ ನನ್ನ ಸಿನಿಮಾ ರಿಲೀಸ್‌ ಆಗುತ್ತೆ, ಇಲ್ಲಿ ನನಗೆ ಅಭಿಮಾನಿಗಳಿರುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಇಲ್ಲಿನ ಜನರ ಪ್ರೀತಿಯನ್ನು ನಾನು ಮರೆಯುವುದಿಲ್ಲ’ ಎಂದ ಅಲ್ಲು ಅರ್ಜುನ್‌, “ಪುಷ್ಪ ಒಂದು ಕಾಲ್ಪನಿಕ ಕಥೆಯುಳ್ಳ ಸಿನಿಮಾ. ಹೆಚ್ಚಿನ ಭಾಗ ಕಾಡಿನಲ್ಲೇ ಚಿತ್ರೀಕರಿಸಿದ್ದು, ಇದಕ್ಕೆ ತಂಡದ ಶ್ರಮವೇಕಾರಣ’ಎಂದರು. ಜೊತೆಗೆ ನಟ ಧನಂಜಯ್‌, ನಟಿ ರಶ್ಮಿಕಾ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು.

ಇದನ್ನೂ ಓದಿ:ವನಿತಾ ಏಕದಿನ ವಿಶ್ವಕಪ್‌ -2022: ಭಾರತದ ಮೊದಲ ಎದುರಾಳಿ ಪಾಕಿಸ್ಥಾನ

ಇದೇ ವೇಳೆ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡ ಅಲ್ಲು, “ಸಿನಿಮಾ ಕೆಲಸಗಳಲ್ಲಿ ತೊಡಗಿದ್ದರಿಂದ ಪುನೀತ್‌ ಅವರ ಮನೆಗೆ ಭೇಟಿ ನೀಡಲು ಆಗಿಲ್ಲ. ಈಗ ನಾನು”ಪುಷ್ಪ’ ಸಿನಿಮಾದ ಪ್ರಚಾರಕ್ಕೆ ಬಂದಿರೋದು. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ. ಸಿನಿಮಾ ಬಿಡುಗಡೆಯಾದ ನಂತರ ಪುನೀತ್‌ ಅವರ ಕುಟುಂಬದ ಭೇಟಿಗೆಂದೇ ಬೆಂಗಳೂರಿಗೆ ಬರುತ್ತೇನೆ’ ಎಂದರು.

ಈ ವೇಳೆ “ಸೂಪರ್‌’ ಎಂದುಕೂಗಿದ ಅಭಿಮಾನಿಗೆ, “ಇದು ಸೂಪರ್‌ ಎನ್ನುವ ವಿಚಾರವಲ್ಲ, ಇದು ನನ್ನ ಕರ್ತವ್ಯ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next