Advertisement

ಉದ್ದೇಶ-ಸಂಕಲ್ಪ ಯಶಸ್ವಿ ಜೀವನದ ಮೂಲ ತತ್ತ್ವ

10:53 AM Jul 10, 2020 | mahesh |

ಜೀವನದ ಅರ್ಥವೇನು? ಜೀವನದ ನಿಜ ಶ್ರೀಮಂತಿಕೆ ಯಾವುದು? ಇವು ಮಾನವ ತನ್ನ ಆರಂಭ ಕಾಲದಿಂದಲೂ ತನ್ನನ್ನು ತಾನೇ ಕೇಳಿಕೊಂಡ ಕುತೂಹ ಲಕಾರಿ ಪ್ರಶ್ನೆಗಳು. ಅನೇಕ ಮಹಾಪುರುಷರು ಜೀವನ ದಲ್ಲಿ ಮನುಷ್ಯನ ಉದ್ದೇಶಕ್ಕೆ ಸಂಬಂಧಿಸಿದಂತೆ ತಾತ್ತ್ವಿಕ ದೃಷ್ಟಿಕೋನದಿಂದ ಉತ್ತರ ನೀಡಿ ಪ್ರೇರೇಪಿಸಿದ್ದಾರೆ. ನಾವು ಯಾಕಾಗಿ ಹುಟ್ಟಿದ್ದೇವೆ? ಹುಟ್ಟಿನ ಉದ್ದೇಶವೇನು? ಕೇವಲ ನಮಗಾಗಿ ಮತ್ತು ನಮ್ಮ ಪ್ರೀತಿ ಪಾತ್ರರಿಗೆ ಹೇಗೆ ನೆರವಾಗಬಹುದು? ಸಾರ್ಥಕ ಜೀವನಕ್ಕೆ ನಾವು ಕಂಡುಕೊಳ್ಳಬೇಕಾದ ಮಾರ್ಗವೇನು ಎಂಬುದರ ಬಗ್ಗೆ ನಾವು ಆಲೋಚಿಸುತ್ತಿರುತ್ತೇವೆ.

Advertisement

ಈ ಹಿನ್ನೆಲೆಯಲ್ಲಿ ಮನುಷ್ಯನು ನಿಸ್ಸಂದೇಹವಾಗಿ ಸಾಧನೆ ಮಾಡಲೆಂದೇ ಜನಿಸಿದ್ದಾನೆ ಎಂಬುದನ್ನು ನಾವು ಅರಿಯಬೇಕಿದೆ. ಯಶಸ್ಸು ಎನ್ನುವುದು ಹಾಗೆಯೇ ಅಥವಾ ಅನುವಂಶಿಕವಾಗಿ ಸಿದ್ಧಿಸುವುದಲ್ಲ. ಅದಕ್ಕೆ ಬೇಕಾದ ತಯಾರಿ, ಸತತ ಪ್ರಯತ್ನ, ಸ್ವ -ಸಾಮರ್ಥ್ಯ, ದೃಢ ಸಂಕಲ್ಪ ಮುಖ್ಯ. ಇದಕ್ಕೆ ನಾವು ಹಲವಾರು ಉದಾಹರಣೆಗಳ ಸಹಿತ ವಿವರಿಸಬಹುದು. ಇವರಲ್ಲಿ ಹಲವಾರು ಕೊರತೆಗಳು ಇದ್ದರೂ ಕೂಡ ಅವುಗಳನ್ನು ಮೆಟ್ಟಿನಿಂತು ಜಗತ್ತಿಗೆ ಮನುಷ್ಯನ ಉದ್ದೇಶವೇನು ಎಂದು ಸಾರಿ ದ್ದಾರೆ? ಅವರಲ್ಲಿ ವಿಶೇಷವಾಗಿ ತನ್ನ ಎರಡನೇ ವಯಸ್ಸಿಗೆ ಕುರುಡ ಹಾಗೂ ಕಿವುಡಳಾಗಿದ್ದ ಹೆಲೆನ್‌ ಕೆಲರ್‌ ತಮ್ಮ ಕೊರತೆಗಳನ್ನು ಮೀರಿ ಹಲವು ಮಹತ್ವದ ಪುಸ್ತಕಗಳನ್ನು ಬರೆದರು. ಯಶಸ್ವಿ ಅಧ್ಯಾಪಕಿ ಯಾಗಿ ಶಿಷ್ಯರನ್ನು ಜಗತ್ತಿಗೆ ನೀಡಿದರು.

ವಿಲ್ಮಾ ರುಡಾಲ್ಫ್ ಎಂಬಾಕೆ ನಾಲ್ಕನೇ ವಯಸ್ಸಿನಲ್ಲಿ ನ್ಯುಮೋನಿಯ ಕಾಯಿಲೆಯಿಂದಾಗಿ ಎಡಗಾಲನ್ನು ಕಳೆದುಕೊಳ್ಳುತ್ತಾಳೆ. ಮುಂದೆ 7ನೇ ವಯಸ್ಸಿಗೆ ನಡೆಯುವುದನ್ನು ಕಲಿತು 1960ರ ಒಲಿಂಪಿಕ್ಸ್‌ನಲ್ಲಿ ಮೂರು ಬಂಗಾರ ಪದಕಗಳನ್ನು ಗೆದ್ದು ಜಗತ್ತನ್ನು ನಿಬ್ಬೆರಗಾಗಿಸಿದ್ದಳು. ಸಾಮಾನ್ಯ ಅಬ್ರಾಹಂ ಲಿಂಕನ್‌ ಅಮೆರಿಕ ಅಧ್ಯಕ್ಷರಾದರು, ಹುಟ್ಟು ಕುರುಡನಾಗಿದ್ದ ಸ್ಟೀವ್‌ ವಂಡರ್‌ ಜಗತ್ತಿನ ಅತ್ಯುನ್ನತ ಸಂಗೀತ ನಿರ್ದೇಶಕನಾದ. ಇವರೆಲ್ಲ ತಮ್ಮಲ್ಲಿರುವ ಇತಿಮಿತಿಗಳು, ಅಡೆತಡೆಗಳನ್ನು ಮೀರಿ ಸಾಧಕರಾಗಿದ್ದಾರೆ.

ಉದ್ದೇಶ ಮತ್ತು ಸಂಕಲ್ಪ. ಇವೆರಡು ನಮ್ಮಲ್ಲಿದ್ದರೆ ಸುಲಭವಾಗಿ ಸಾಧನೆಗೈಯಬಹುದು.ಸ್ಫೂರ್ತಿ ಎಂಬುವುದು ಹರಿಯುವ ನೀರಿನಂತೆ. ಅಂತೆಯೇ ಹರಿಯುವ ನೀರು ಕೂಡ ನಮಗೆ ಯಾವುದೋ ಒಂದು ವಿಧದಲ್ಲಿ ಸ್ಫೂರ್ತಿಯಾಗಬಲ್ಲುದು. ಬದಲಾವಣೆಗೆ ಮುನ್ನುಡಿಯಾಗುವುದು. ಜವಾಬ್ದಾರಿಗಳನ್ನು ಸ್ವೀಕರಿಸಿ, ಇತರರಿಗಿಂತ ಭಿನ್ನವಾಗಿ ಕಾರ್ಯ ಮಾಡಿದಾಗ ನಾವು ಯಶಸ್ವಿಯಾಗಬಹುದು. ಉದ್ದೇಶವಿಲ್ಲದ ನಮ್ಮ ಜೀವನ ನಾವಿಕನಿಲ್ಲದ ಹಡಗಿನಂತೆಯೇ ಯಶಸ್ಸಿನ ರಹಸ್ಯ ಸ್ಥಿರವಾದ ಸಂಕಲ್ಪವಾಗಿರುತ್ತದೆ.

Advertisement

ಭ್ರಮರಾಂಬಿಕಾ ದೇವಿ ಕೆ.ಎಂ.,  ಬಾಪೂಜಿ ಬಿ. ಸ್ಕೂಲ್‌, ದಾವಣಗೆರೆ (ಎಂಬಿಎ)

Advertisement

Udayavani is now on Telegram. Click here to join our channel and stay updated with the latest news.

Next