Advertisement

ನಟ ಪ್ರಕಾಶ್ ರೈ ಪಾಲ್ಗೊಂಡಿದ್ದ ವೇದಿಕೆ, ಆವರಣ ಗೋಮೂತ್ರದಿಂದ ಶುದ್ಧಿ!

01:42 PM Jan 16, 2018 | Team Udayavani |

ಕಾರವಾರ: ನಟ ಪ್ರಕಾಶ್ ರೈ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ರಾಘವೇಂದ್ರ ಕಲ್ಯಾಣ ಮಂಟಪ ಆವರಣವನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಶುದ್ಧೀಕರಿಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಹಿಂದೂ ಸಮಾಜ ಗೋವನ್ನು ಪೂಜಿಸುತ್ತದೆ. ಆದರೆ ರೈಯಂತಹ ಗೋಮಾಂಸ ಭಕ್ಷಿಸುವ ಮಾತನ್ನಾಡುವ, ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿಯ ಭೇಟಿಯಿಂದಾಗಿ ಶಿರಸಿ ನಗರ ಅಪವಿತ್ರವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ನಟ ಪ್ರಕಾಶ್ ರೈ ಅವರು ವೇದಿಕೆಯಲ್ಲಿ ಸಚಿವ ಅನಂತಕುಮಾರ್ ಹೆಗಡೆ, ಬಿಜೆಪಿ ಹಾಗೂ ಹಿಂದೂ ಧರ್ಮದ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಕಲ್ಯಾಣ ಮಂಟಪದ ಆವರಣದಲ್ಲಿರುವ ವೇದಿಕೆಯನ್ನು, ಮಠದ ಆವರಣವನ್ನು ಗೋ ಮೂತ್ರದಿಂದ ಶುದ್ಧೀಕರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಪಕ್ಷದ ಸ್ಥಳೀಯ ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ, ರೇಖಾ ಹೆಗಡೆ, ವೀಣಾ ಭಟ್ಟ, ಸುರೇಶ ಶೆಟ್ಟಿ, ರವೀಶ ಹೆಗಡೆ, ಸುದರ್ಶನ ವೈದ್ಯ ಅವರೊಂದಿಗೆ ಮಠದ ಆವರಣದಲ್ಲಿ ಸೋಮವಾರ ಗೋಮೂತ್ರ ಸಿಂಪಡಿಸಿ ಘೋಷಣೆ ಕೂಗಿದರು.

ಪ್ರೀತಿ ಪದಗಳ ಪಯಣ ಸಮಿತಿಯು ಶನಿವಾರ ಶಿರಸಿಯಲ್ಲಿ ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು, ಕಾರ್ಯಕ್ರಮವನ್ನು ನಟ ಪ್ರಕಾಶ್ ರೈ ಉದ್ಘಾಟಿಸಿ ಮಾತನಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next