Advertisement

ಪತ್ನಿಗೆ ಕಿರುಕುಳ ನೀಡಿದ ಆರೋಪಿಗೆ ಶಿಕ್ಷೆ

03:35 PM Apr 08, 2017 | Team Udayavani |

ಕಲಬುರಗಿ: ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪಿಗೆ ಕಲಬುರಗಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಸೌಭಾಗ್ಯ ಭೂಸೇರ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 

Advertisement

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ವಾಜಂತ್ರಿ ಗ್ರಾಮದ ಅನಿಲಕುಮಾರ ರಮೇಶ ವಾಜಂತ್ರಿ ಶಿಕ್ಷೆಗೊಳಗಾದವರು. ಅನಿಲಕುಮಾರ ವಾಜಂತ್ರಿ ಕಲಬುರಗಿ ನಗರದ ನ್ಯೂ ಸಂತೋಷ ಕಾಲೋನಿಯ ಮಹಿಳೆಯನ್ನು 2009 ರ ಡಿ.13 ರಂದು ಮದುವೆಯಾಗಿದ್ದ. 

ಮದುವೆ ನಂತರ ಸ್ವಲ್ಪದಿನ ಸರಿಯಾಗಿದ್ದ ಆತ ನಂತರ ತನ್ನ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದ. ಈ ಬಗ್ಗೆ ಆತನ ವಿರುದ್ದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ್ದರಿಂದ ಅನಿಲಕುಮಾರ ವಾಜಂತ್ರಿಗೆ ಒಂದು ವರ್ಷ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 15 ಸಾ.ರೂ. ದಂಡ ವಿಧಿಸಿದ್ದಾರೆ. ದಂಡದ ರೂಪದಲ್ಲಿಯ 12 ಸಾ.ರೂ.ಗಳನ್ನು ದೂರುದಾರಳಿಗೆ ನೀಡಬೇಕೆಂದು ಆದೇಶಿಸಿದ್ದಾರೆ. 

ಸರ್ಕಾರದ ಪರವಾಗಿ ಕಲಬುರಗಿ ಹಿರಿಯ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next