Advertisement

ಚುನಾವಣೆಯಲ್ಲಿ ದೇಶ ವಿರೋಧಿಗಳ ಬೆಂಬಲಿಗರಿಗೆ ತಕ್ಕ ಪಾಠ ಕಲಿಸಿ: ಪ್ರಧಾನಿ ಮೋದಿ

09:44 AM Feb 05, 2020 | Nagendra Trasi |

ನವದೆಹಲಿ: ಯಾರು ದೇಶ ವಿರೋಧಿ ಪಡೆಗಳನ್ನು ಬೆಂಬಲಿಸುತ್ತಾರೋ ಅಂತಹವರಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದಿಲ್ಲಿ ಮತದಾರರಿಗೆ ಕರೆ ನೀಡಿದ್ದಾರೆ.

Advertisement

ದಿಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದ್ವಾರಕಾದಲ್ಲಿ ಬೃಹತ್ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ದಿಲ್ಲಿ ಅಭಿವೃದ್ದಿ ಕುರಿತ ನೀತಿಗಳ ಬಗ್ಗೆ ಕಳೆದ ಆರು ವರ್ಷಗಳಿಂದ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿದೆ ಎಂದರು.

ವಿರೋಧ ಪಕ್ಷಗಳು ರಾಷ್ಟ್ರೀಯ ಭದ್ರತೆಯನ್ನು ಪ್ರಶ್ನಿಸುತ್ತವೆ…ಆದರೆ ಇವರು ದಿಲ್ಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಬೆಂಬಲ ನೀಡುತ್ತಾರೆ ಎಂದು ಚಾಟಿ ಬೀಸಿದರು. ಕೇಂದ್ರ ಸರ್ಕಾರ ಬಡವರಿಗಾಗಿ ನೀಡುವ ಯೋಜನೆಗಳನ್ನು ಕೇಜ್ರಿವಾಲ್ ಸರ್ಕಾರ ತಲುಪದಂತೆ ಮಾಡಿದೆ ಎಂದು ಮೋದಿ ಆರೋಪಿಸಿದರು.

ದಿಲ್ಲಿಯಲ್ಲಿನ ನಕಾರಾತ್ಮಕ ರಾಜಕೀಯ ಅಂತ್ಯಗೊಳ್ಳಬೇಕಾಗಿದೆ. ಅಲ್ಲದೇ ದಿಲ್ಲಿಯ ಜನರಿಗೆ ಕೇಂದ್ರದ ಎಲ್ಲಾ ಯೋಜನೆಯ ಲಾಭ ದೊರೆಯುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next