Advertisement

ಪುನೀತ್‌ ಸಾಗರ್‌ ಅಭಿಯಾನ್‌

11:42 AM Apr 11, 2022 | Team Udayavani |

ಉಳ್ಳಾಲ: ಎನ್‌ಸಿಸಿ ಕೇಂದ್ರ ಕಚೇರಿ ಮಂಗಳೂರು, ನೆಹರೂ ಯುವಕ ಕೇಂದ್ರ ಮಂಗಳೂರು, ಉಳ್ಳಾಲ ನಗರಸಭೆ, ರಾಷ್ಟ್ರೀಯ ಸೇವಾ ಯೋಜನೆ ಯೇನಪೋಯ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಉಳ್ಳಾಲ ಕಡಲ ಕಿನಾರೆಯಲ್ಲಿ ಪುನೀತ್‌ ಸಾಗರ್‌ ಅಭಿಯಾನ್‌ ಕಾರ್ಯಕ್ರಮ ಜರಗಿತು.

Advertisement

ದ.ಕ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್‌ಸಿಸಿ ಅಧಿಕಾರಿಗಳಾದ ಲೆ| ಅಮಿತಾಬ್‌ ಸಿಂಗ್‌, ಲೆ| ಭರತ್‌ ಕುಮಾರ್‌, ಮಂಗಳೂರಿನ ನೌಕಾ ಬೆಟಾಲಿಯನ್‌ ಕೆಡೆಟ್‌ಗಳು ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ರಾಯಪ್ಪ, ಮಂಗಳೂರಿನ ನೆಹರೂ ಯುವಕ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್‌ ಸೂಟರ್‌ಪೇಟೆ, ಯೇನಪೊಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜಕಿ ಡಾ| ಅಶ್ವಿ‌ನಿ, ಸರಕಾರೇತರ ಸಂಸ್ಥೆಯ ಪ್ರತಿನಿಧಿ ಎಂ. ವಾಸುದೇವ ರಾವ್‌ ಭಾಗವಹಿಸಿದ್ದರು.

ಪುನೀತ್‌ ಸಾಗರ್‌ ಅಭಿಯಾನದಲ್ಲಿ ಅನೇಕ ಯುವ ಮುಂದಾಳುಗಳು, ಊರ ನಾಗರಿಕರು, ವಿವಿಧ ಕಾಲೇಜುಗಳ ಸುಮಾರು 185ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿ 300 ಕಿಲೋ ಒಣ ತ್ಯಾಜ್ಯವನ್ನು ಸಂಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next