Advertisement

ಕುಟುಂಬದ ಒಡನಾಡಿ ಪುನೀತ್‌ ಅಗಲಿಕೆಗೆ ಎಂ.ಬಿ.ಪಾಟೀಲ ಕಂಬನಿ

02:20 PM Oct 30, 2021 | Shwetha M |

ವಿಜಯಪುರ: ತಮ್ಮ ಕುಟುಂಬದ ಒಡನಾಡಿಯಾಗಿದ್ದ ಕನ್ನಡ ಚಿತ್ರರಂಗದ ಪ್ರತಿಭಾವಂತ ನಾಯಕ ನಟ ಪುನೀತ್‌ ರಾಜಕುಮಾರ ನಿಧನಕ್ಕೆ ಮಾಜಿ ಸಚಿವ ಎಂ.ಬಿ. ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಪುನೀತ್‌ ಆಕಸ್ಮಿಕವಾಗಿ ನಮ್ಮನ್ನಗಲಿರುವುದು ಆಘಾತ ತಂದಿದೆ. ಭಾರತೀಯ ಚಿತ್ರರಂಗದ ದಿಗ್ಗಜ ತಾರೆ ಡಾ| ರಾಜಕುಮಾರ ಪುತ್ರರಾಗಿ, ಸ್ವಯಂ ಸ್ಟಾರ್‌ ನಟರಾಗಿದ್ದರೂ ಅತ್ಯಂತ ಸೌಮ್ಯ, ಸರಳ ಸ್ವಭಾವದ ಪುನೀತ್‌ ರಾಜಕುಮಾರ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದರು. ಚಿತ್ರರಂಗದ ಹೊರತಾಗಿಯೂ ಸಮಾಜ ಸೇವೆ ಮೂಲಕ ಮಾನವೀಯ ತುಡಿತ ಹೊಂದಿದ್ದ ಇವರು ಸದಾ ನೊಂದವರಿಗೆ ಸಹಾಯ ಹಸ್ತ ಚಾಚುತ್ತಿದ್ದರು ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ: ಅಪ್ಪು ಅಗಲಿಕೆಗೆ ಅಭಿಮಾನಿಗಳ ಭಾವಪೂರ್ಣ ಶ್ರದ್ದಾಂಜಲಿ

ಕಳೆದ ತಿಂಗಳು ಬೆಂಗಳೂರಿನ ನನ್ನ ಮನೆಗೆ ಅವರು ಕುಟುಂಬ ಸಮೇತರಾಗಿ ಬಂದಿದ್ದ ಸಂದರ್ಭದಲ್ಲಿ ಹಲವಾರು ವಿಷಯಗಳ ಕುರಿತು ನನ್ನೊಂದಿಗೆ ಚರ್ಚಿಸಿದ್ದರು. ನನ್ನ ಕಿರಿಯ ಪುತ್ರ ಧ್ರುವ ಮತ್ತು ಪುನೀತ್‌ ರಾಜಕುಮಾರ ಪುತ್ರಿ ಒಂದೇ ದಿನ ವ್ಯಾಸಂಗಕ್ಕೆ ಅಮೇರಿಕಕ್ಕೆ ತೆರಳಿದ ಸಂದರ್ಭದಲ್ಲೂ ನಾವಿಬ್ಬರೂ ವಿಮಾನ ನಿಲ್ದಾಣದಲ್ಲಿ ಜೊತೆಗಿದ್ದೆವು. ಅಪ್ಪು ಅವರ ಅಗಲಿಕೆ ನನ್ನ ಕುಟುಂಬ ಸದಸ್ಯನನ್ನು ಕಳೆದುಕೊಂಡ ಭಾವ ಮೂಡಿಸಿದೆ ಎಂದು ಎಂ.ಬಿ. ಪಾಟೀಲ ಸಂತಾಪದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next