Advertisement

Seetha Payana: ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್‌ ಹೀರೋ

03:25 PM Oct 17, 2024 | Team Udayavani |

ನಿರ್ದೇಶಕ ಅರ್ಜುನ್‌ ಸರ್ಜಾ ಸದ್ದಿಲ್ಲದೇ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು “ಸೀತಾ ಪಯಣ’. ಈ ಚಿತ್ರದಲ್ಲಿ ನಿರಂಜನ್‌ ನಾಯಕರಾಗಿ ನಟಿಸಿದ್ದಾರೆ. ಯಾರು ನಿರಂಜನ್‌ ಎಂದರೆ ಉಪೇಂದ್ರ ಅವರ ಮನೆಯ ಕಡೆಗೆ ಬೆರಳು ತೋರಿಸಬೇಕು. ಏಕೆಂದರೆ ಈ ನಿರಂಜನ್‌ ಬೇರಾರು ಅಲ್ಲ, ಉಪೇಂದ್ರ ಅಣ್ಣ ಸುಧೀಂದ್ರ ಅವರ ಪುತ್ರ. ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ನಿರಂಜನ್‌ ನಟಿಸಿದ್ದು, ಆ ಚಿತ್ರಗಳು ಬಿಡುಗಡೆಯ ಹಂತಕ್ಕೆ ಬಂದಿವೆ. ಈ ನಡುವೆಯೇ ನಿರಂಜನ್‌ ಸದ್ದಿಲ್ಲದೇ “ಸೀತಾ ಪಯಣ’ದಲ್ಲಿ ನಟಿಸಿದ್ದಾರೆ.

Advertisement

ಅರ್ಜುನ್‌ ಸರ್ಜಾ ನಿರ್ದೇಶಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ “ಪ್ರೇಮ ಬರಹ’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ತಮ್ಮ ಮಗಳು ಐಶ್ವರ್ಯ ಅರ್ಜುನ್‌ ಅವರನ್ನು ನಾಯಕಿಯನ್ನಾಗಿಸುವ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಟ ಚಂದನ್‌ ಈ ಚಿತ್ರದ ಹೀರೋ. 2018ರಲ್ಲಿ ರೊಮ್ಯಾಂಟಿಕ್‌ ಡ್ರಾಮಾ ಕಥಾಹಂದರದ ಈ ಸಿನಿಮಾವನ್ನು ಸ್ವತಃ ಅರ್ಜುನ್‌ ಸರ್ಜಾ ನಿರ್ದೇಶಿಸಿ, ತಮ್ಮದೇ ಶ್ರೀರಾಮ್‌ ಫಿಲಂಸ್‌ ಬ್ಯಾನರ್‌ನಡಿ ನಿರ್ಮಿಸಿದ್ದರು. ಈ ಚಿತ್ರಕ್ಕೆ ಕಥೆಯನ್ನೂ ಸ್ವತಃ ಅವರೇ ಬರೆದಿದ್ದರು.

ಅದಕ್ಕೂ ಮೊದಲು 2014ರಲ್ಲಿ ತೆರೆಕಂಡ “ಅಭಿಮನ್ಯು’ ಸಿನಿಮಾವನ್ನು ಅರ್ಜುನ್‌ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಬಂದಿತ್ತು. ಇತ್ತೀಚೆಗೆ ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್ ಮಟ್ಟದಲ್ಲಿ ತೆರೆಕಂಡ ಧ್ರುವಾ ಸರ್ಜಾ ಅವರ “ಮಾರ್ಟಿನ್‌’ ಚಿತ್ರಕ್ಕೂ ಅರ್ಜುನ್‌ ಕಥೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next