Advertisement

PUNE: ಇದು ಹುಡುಗಾಟವಾ? ತಮಾಷೆಯಿಂದಾಗಿ 16 ವರ್ಷದ ಬಾಲಕ ಕೊನೆಯುಸಿರೆಳೆದ!

05:14 PM Dec 08, 2023 | Team Udayavani |

ಪುಣೆ: ತಮಾಷೆಗಾಗಿ 16 ವರ್ಷದ ಬಾಲಕನ ಗುದನಾಳದೊಳಕ್ಕೆ ಏರ್‌ ಕಂಪ್ರೆಸರ್‌ ನ ನೀರ್ಕೊಳವೆಯನ್ನು ತುರುಕಿದ ಪರಿಣಾಮ ಬಾಲಕ ಕೊನೆಯುಸಿರೆಳೆದಿರುವ ಘಟನೆ ಪುಣೆಯ ಹಡಪ್ಸರ್‌ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಈಕೆಗೆ ದಿನಾ ತಿನ್ನಲು ಜಾನ್ಸನ್ ಬೇಬಿ ಪೌಡರೇ ಬೇಕಂತೆ… ಇದು ಬಿಟ್ಟು ಬೇರೆ ಏನು ಬೇಡ್ವಂತೆ

ಈ ಘಟನೆ ಸೋಮವಾರ ಹಡಪ್ಸರ್‌ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಬಗೆಯ ಹಿಟ್ಟನ್ನು ಉತ್ಪಾದಿಸುವ ಆಹಾರ ಘಟಕದಲ್ಲಿ ನಡೆದಿದೆ. ಧೀರಜ್‌ ಗೋಪಾಲ್‌ ಸಿಂಗ್‌ ಎಂಬಾತ ಮೋತಿಲಾಲ್‌ (16ವರ್ಷ) ಎಂಬ ಬಾಲಕನ ಗುದನಾಳದೊಳಕ್ಕೆ ಏರ್‌ ಕಂಪ್ರೆಸರ್‌ ನ ನೀರ್ಕೊಳವೆಯನ್ನು ತುರುಕಿದ್ದ. ಆದರೆ ತಮಾಷೆಗಾಗಿ ಮಾಡಿದ ಈ ಘಟನೆಯಿಂದಾಗಿ ಬಾಲಕನ ಹೊಟ್ಟೆ ಉಬ್ಬತೊಡಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು.

ಸ್ಥಳೀಯ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿಯೇ ಕೊನೆಯುಸಿರೆಳೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ್‌ ಸಿಂಗ್‌ (21ವರ್ಷ)ನನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.

ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 304ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆಹಾರ ಘಟಕದಲ್ಲಿ ಧೂಳು ಸ್ವಚ್ಛಗೊಳಿಸಲು ಕಂಪ್ರೆಸರ್‌ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next