Advertisement

ಉಡುಪಿ ಕಾಲೇಜಿನಲ್ಲಿ ಹೈಡ್ರಾಮಾ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಒತ್ತಾಯ; ಅವಕಾಶ ನಿರಾಕರಣೆ

12:17 PM Apr 22, 2022 | Team Udayavani |

ಉಡುಪಿ: ದ್ವಿತೀಯ ಪಿಯು ವಿದ್ಯಾರ್ಥಿಗಳ ಮುಖ್ಯ ಪರೀಕ್ಷೆ ಇಂದು ಆರಂಭವಾಗಿದ್ದು, ಉಡುಪಿಯಲ್ಲಿ ಹಿಜಾಬ್ ಕುರಿತಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

Advertisement

ಹೈಕೋರ್ಟ್ ಮೆಟ್ಟಿಲೇರಿದ 6 ವಿದ್ಯಾರ್ಥಿಗಳಲ್ಲಿ ನಾಲ್ವರು ಪ್ರವೇಶ ಪತ್ರವನ್ನೂ ಪಡೆದಿಲ್ಲ. ಆದರೆ ಆಲಿಯಾ ಅಸಾದಿ ಮತ್ತು ರೇಸಂ ಕೊನೆಯ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಆದರೆ ಅವರಿಬ್ಬರು ಹಿಜಾಬ್ ತೆಗೆಯದೇ ಪರೀಕ್ಷೆ ಬರೆಯಲು ಅನುಮತಿ ಕೇಳಿದ್ದು, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಪರೀಕ್ಷೆ ಬರೆಯದೆ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆದ ‘ಹುಬ್ಬಳ್ಳಿ ವಿವಾದಾತ್ಮಕ ಪೋಸ್ಟ್’ ಬಂಧಿತ ಆರೋಪಿ

ವಿದ್ಯೋದಯ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಮನವೊಲಿಕೆ ಪ್ರಯತ್ನ ನಡೆಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಮನವೊಲಿಕೆ ಮಾಡಿದರೂ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯಲು ಒಪ್ಪದೆ, ಕೇಂದ್ರದಿಂದ ಮರಳಿದರು.

Advertisement

ಹಿಜಾಬ್ ಕುರಿತಾಗಿ ಕೋರ್ಟ್ ಮೆಟ್ಟಿಲೇರಿದ್ದ ಐವರು ವಿದ್ಯಾರ್ಥಿನಿಯರ ಸಹಿತ 18 ವಿದ್ಯಾರ್ಥಿನಿಯರು ಸರಕಾರಿ ಬಾಲಕಿಯರ ಪ್ರೌಢಶಾಲೆಯಿಂದ ಪ್ರವೇಶ ಪತ್ರವನ್ನೇ ಪಡೆದಿಲ್ಲ.

ಡಿಸಿ ಭೇಟಿ: ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next