Advertisement

ಕ್ಷಮಾದಾನದ ವಿವರ ಪ್ರಕಟಿಸಿ

06:00 AM Aug 20, 2018 | Team Udayavani |

ನವದೆಹಲಿ: ಜೀವಾವಧಿ ಶಿಕ್ಷೆ ವಿಧಿಸಿದವರಿಗೆ ಕ್ಷಮಾದಾನ ನೀಡಿದ ಅಥವಾ ತಿರಸ್ಕರಿಸಿದ ಎಲ್ಲ ವಿವರಗಳನ್ನೂ ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ ಸೂಚನೆ ನೀಡಿದೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸಿಐಸಿ ಈ ಸೂಚನೆ ನೀಡಿದ್ದು, 2000ನೇ ಇಸ್ವಿಯ ನಂತರದ ವಿವರಗಳನ್ನು ಪ್ರಕಟಿಸುವಂತೆ ಸೂಚಿಸಿದೆ. ಯಾಕೆ ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ. ಅಲ್ಲದೆ ಸುಪ್ರೀಂಕೋರ್ಟ್‌ ನಿರ್ದೇಶಿಸಿದಂತೆ ಕ್ಷಮಾದಾನಕ್ಕೆ ಕೇಂದ್ರ ಸರ್ಕಾರ ಯಾವುದೇ ನಿಯಮಗಳನ್ನು ರೂಪಿಸಿದೆಯೇ ಎಂದೂ ತಿಳಿಸಬೇಕು ಎಂದು ಅದು ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next