Advertisement

ರಂಗಭೂಮಿ ಕಲಾವಿದರ ಹಿಕೋರಾ

10:06 AM Jan 04, 2020 | mahesh |

ಅದೊಂದು ಪಾಳುಬಿದ್ದ ಕಟ್ಟಡ. ಅಲ್ಲಿನ ಸುತ್ತಮುತ್ತ ವಾತಾವರಣ ಕೂಡ ರಗಡ್‌ ಆಗಿಯೇ ಇತ್ತು. ಹಾಗೆ ಆ ಕಟ್ಟಡ ಸಮೀಪ ಹಾದುಹೋಗುತ್ತಿದ್ದಂತೆಯೇ, “ಏಳ್ಳೋ ಎದ್ದೇಳ್ಳೋ ಗುರಿ ಮುಟ್ಟುವ ತನಕ ನಿಲ್ಲದಿರೋ…’ ಎಂಬ ಹಾಡು ಕಿವಿಗಪ್ಪಳಿಸುತ್ತಿತ್ತು. ಮನೋಜ್‌ ಹಾಗೂ ಯಶವಂತ್‌ ಶೆಟ್ಟಿ ತಮ್ಮ ಸಹ ಕಲಾವಿದರ ಜೊತೆ ಹೆಜ್ಜೆ ಹಾಕುತ್ತಿದ್ದರು. ಮಾಸ್ಟರ್‌ ಅರವಿಂದ್‌ ಹೇಳಿದಂತೆ ಅವರೆಲ್ಲರೂ ಸ್ಟೆಪ್‌ ಹಾಕುತ್ತಿದ್ದರು. ಆ ಸೀನ್‌ ಓಕೆ ಆಗಿದ್ದೇ ತಡ, ಎಲ್ಲರಿಗೂ ಬ್ರೇಕ್‌ ಸಿಕ್ತು. ನಂತರ ಆ ಚಿತ್ರತಂಡ ಪತ್ರಕರ್ತರ ಮುಂದೆ ಮಾತುಕತೆಗೆ ಕುಳಿತುಕೊಂಡಿತು.

Advertisement

ಅಂದಹಾಗೆ, ಅದು “ಹಿಕೋರಾ’ ಚಿತ್ರತಂಡ. ಈ ಚಿತ್ರಕ್ಕೆ ಕೃಷ್ಣಪೂರ್ಣ ನಿರ್ದೇಶಕರು. ಪ್ರಮುಖ ಪಾತ್ರದಲ್ಲೂ ಅವರು ನಟಿಸುತ್ತಿದ್ದಾರೆ. ತಮ್ಮ ಚಿತ್ರದ ಬಗ್ಗೆ ಅವರು ಹೇಳಿದ್ದಿಷ್ಟು. “ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ. ಹಾಗಾಗಿ, ಸಿನಿಮಾ ಕಥೆ ಬಗ್ಗೆ ಸಣ್ಣದ್ದಾಗಿ ಹೇಳಿಕೊಂಡರೂ, ಚಿತ್ರದ ಕಥೆ ಬಿಟ್ಟುಕೊಟ್ಟಂತಾಗುತ್ತದೆ. ಕಥೆಯಲ್ಲಿ ನಿರ್ದೇಶಕ ಖನ್ನತೆಯಲ್ಲಿರುವ ಸಂದರ್ಭದಲ್ಲಿ ನಾಯಕರು ಉತ್ಸಾಹ ತುಂಬಲು ಸ್ವಾಮಿ ವಿವೇಕಾನಂದ ಅವರ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ..’ ಮಾತನ್ನು ಹಾಡಲ್ಲಿ ಕಟ್ಟಿಕೊಡಲಾಗಿದೆ. ಈಗಿನ ಯೂಥ್‌ಗೆ ಗುರಿಯಾಗಿರಿಸಿಕೊಂಡು ಬಳಸಿರುವ ಗೀತೆ ಅದು. ಸಾಗರ, ಜೋಗ, ಬೆಂಗಳೂರು ಸುತ್ತಮುತ್ತ ಈವರೆಗೆ ಶೇ. 97 ರಷ್ಟು ಚಿತ್ರೀಕರಣ ನಡೆದಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಕೃಷ್ಣ.

ಯಶ್‌ವಂತ್‌ ಶೆಟ್ಟಿ, “ಟಕ್ಕರ್‌’ ಹೀರೋ ಮನೋಜ್‌ ಗೀತೆಗೆ ಹೆಜ್ಜೆ ಹಾಕಿದ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ, ರಾಧಾಶ್ರೀ, ಸರ್ದಾರ್‌ ಸತ್ಯ, ಸ್ಪಂದನಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ರಮೇಶ್‌ಬಾಬು ಅವರ ಛಾಯಾಗ್ರಹಣವಿದೆ. ಈ ಹಿಂದೆ “ನೀನಾಸಂ’ನಲ್ಲಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಊಟೋಪಚಾರ ನೋಡಿಕೊಳ್ಳುತ್ತಿದ್ದ ರತ್ನಾ ಶ್ರೀಧರ್‌ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next