Advertisement

ಪೊಲೀಸಪ್ಪನ ಅಮಾನತ್ತಿಗೆ ಕಾರಣವಾಯ್ತು ‘ಮೇಕೆ’…!

10:06 PM Feb 27, 2021 | Team Udayavani |

ರಾಜಸ್ಥಾನ : ದೇವರ ಹೆಸರಿನಲ್ಲಿ ಮೇಕೆ ಬಲಿ ಕೊಟ್ಟ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತನ್ನ ಕರ್ತವ್ಯಕ್ಕೆ ಸಂಚಕಾರ ತಂದುಕೊಂಡ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ. ಕೋಟಾ ಜಿಲ್ಲೆಯ ಎಸ್‍ಐ ಭನ್ವಾರ್ ಸಿಂಗ್ ಪ್ರಾಣಿ ಬಲಿ ಪ್ರಕರಣದಡಿ ಶುಕ್ರವಾರ (ಫೆ.26) ಅಮಾನತ್ತುಗೊಂಡಿದ್ದಾರೆ.

Advertisement

ಫೆ.19 ರಂದು ರಜೆ ಮೇಲೆ ತೆರಳಿದ್ದ ಭನ್ವಾರ್ ಸಿಂಗ್ ಮನೆಯ ಕಾರ್ಯಕ್ರಮವೊಂದರಲ್ಲಿ ದೇವಿಗೆ ಹರಕೆ ತೀರಿಸಿದ್ದರು. ಅವರು ಮೇಕೆ ಕುತ್ತಿಗೆ ಕತ್ತರಿಸಿ ಬಲಿ ಕೊಡುತ್ತಿದ್ದ 54 ಸೆಕೆಂಡ್‍ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಭಾರೀ ವಿರೋಧ ಪಡೆದುಕೊಂಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿ ದಯಾ ಸಂಘ ಹಾಗೂ ಸಾರ್ವಜನಿಕರು ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಪ್ರಕರಣದ ಕುರಿತು ಕೋಟಾ ಗ್ರಾಮೀಣ ಠಾಣೆಯ ಪೊಲೀಸ್ ವರಿಷ್ಟಾಧಿಕಾರಿ ಶರದ್ ಚೌದ್ರಿಯಾ, ಗುರುವಾರ (ಫೆ.25) ಭನ್ವಾರ್ ಸಿಂಗ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಶುಕ್ರವಾರ ಕರ್ತವ್ಯದಿಂದ ಭನ್ವಾರ್ ಸಿಂಗ್ ಅವರನ್ನು ಅಮಾನತ್ತು ಮಾಡಿ ಶಿಸ್ತು ಕ್ರಮ ಜರುಗಿಸಲಾಗಿದೆ. ಜತೆಗೆ ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next