Advertisement

ವಿಜಯನಗರ: ನಿವೃತ್ತಿ ದಿನವೇ ಕೋವಿಡ್ ಗೆ ಬಲಿಯಾದ ಪಿಎಸ್ಐ

11:02 AM Jun 30, 2021 | Team Udayavani |

ವಿಜಯನಗರ: ಇಂದು  ನಿವೃತ್ತಿ ಹೊಂದಬೇಕಾಗಿದ್ದ ಪಿಎಸ್ಐಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾದ ದಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

Advertisement

ಯಲ್ಲಪ್ಪ ಕದ್ರಳ್ಳಿ(60) ಕೋವಿಡ್ ನಿಂದ ಮೃತಪಟ್ಟ ಪಿಎಸ್ಐ. ಇವರು ಇಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಕಳೆದ 15 ದಿನಗಳಿಂದ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ನಟಿ ಮಂದಿರ ಬೇಡಿ ಪತಿ, ನಿರ್ದೇಶಕ ರಾಜ್ ಕೌಶಲ್ ಹೃದಯಾಘಾತದಿಂದ ನಿಧನ 

ಯಲ್ಲಪ್ಪ ಕದ್ರಳ್ಳಿ ಕಳೆದ 38 ವರ್ಷಗಳಿಂದ ಸೇವೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐಯಾಘಿ ಕರ್ತವ್ಯದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next