Advertisement

ಹಕ್ಕು ಪತ್ರಕ್ಕೆ ಆಗ್ರಹಿಸಿ ಇರುಳಿಗರ ಪ್ರತಿಭಟನೆ

12:04 PM Feb 28, 2021 | Team Udayavani |

ರಾಮನಗರ: ಅರಣ್ಯ ಹಕ್ಕು ಕಾಯ್ದೆ – 2006ರ ಪ್ರಕಾರ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ, ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಸಮುದಾಯದ ಕುಟುಂಬಗಳು ಸತತ 6ನೇ ದಿನವೂ ವಾಸ್ತವ್ಯ ಮುಂದುವರೆಸಿದ್ದಾರೆ.

Advertisement

ಅರಣ್ಯ ಪ್ರದೇಶದಲ್ಲಿ ಅಹೋರಾತ್ರಿ ವಾಸ್ತವ್ಯ ಹೂಡಿದ್ದು, ಅಲ್ಲೇ, ಅಡುಗೆ ಮಾಡಿ ನ್ಯಾಯಕ್ಕಾಗಿ ದಿನ ದೂಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಕೃಷ್ಣ ಮೂರ್ತಿ, ಕಳೆದ 8 ವರ್ಷಗಳಿಂದ ಅರಣ್ಯ ಭೂಮಿ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಜಿಲ್ಲಯಲ್ಲಿ ಬುಡಕಟ್ಟು ಜನಾಂಗದ ಮನವಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ರಾಷ್ಟ್ರೀಯ ಉದ್ಯಾನ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶ ವಾಸಿಸುವ ಜನರಿಗೆ ಬೇರೆ ಕಡೆ ಭೂಮಿ ನೀಡಿ, ಸ್ಥಳಾಂತರಿಸಬೇಕೆಂಬ ಆದೇಶವಿತ್ತು. ಇದನ್ನೇ ಅಸ್ತ್ರವಾಗಿ ಬಳಸಿ ಕೊಂಡು ಅರಣ್ಯ ಇಲಾಖೆ, ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬಿಸಲಾಗಿತ್ತು ಎಂದರು.

ಅರಣ್ಯ ಹಕ್ಕು ಕಾಯ್ದೆ – 2006 ಜಾರಿಗೆ ಬಂದಿದೆ. ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್‌ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿ ಸಿರುವ ಜಾಗದಲ್ಲಿಯೇ, ಅರಣ್ಯ ಭೂಮಿ ಒಳಗೊಂಡಂತೆ ಅಲ್ಲಿಯೇ, ಪುನರ್‌ ವಸತಿಕಲ್ಪಿಸಲು ಅವಕಾಶವಿದ್ದರೂ, ಬುಡಕಟ್ಟು ಸಮುದಾಯಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.2019ರಲ್ಲಿ ಸರ್ವೋತ್ಛ ನ್ಯಾಯಾಲಯಬುಡಕಟ್ಟು ಜನಾಂಗಕ್ಕೆ ಕಾಯ್ದೆಯನ್ವಯ ಹಕ್ಕು ಪತ್ರ ಕೊಡುವಂತೆ ಸೂಚಿಸಿದೆ. ಅದಕ್ಕೂ ಅಧಿಕಾರಿಗಳು ಮನಣೆ ನೀಡುತ್ತಿಲ್ಲ. ಜಮೀನಿನ ಬದು, ಒರಳುಕಲ್ಲು, ಪೂಜಾ ಸ್ಥಳ 1993-94ರಲ್ಲಿ ರಾಮನಗರ ತಹಶೀಲ್ದಾರ್‌ ಕಚೇರಿ ಹಿಂಬರಹ, ಸ್ಮಶಾನ ಮುಂತಾದ ಸಾಕ್ಷಗಳಿ ದ್ದರೂ, ಮನವಿ ಪರಿಗಣಿಸುತ್ತಿಲ್ಲ ಎಂದರು.

ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿ ಫೆ.23ರಂದು ಸ್ಥಳ ಪರಿಶೀಲಿಸಬೇಕಿತ್ತು. ಆದರೆ, ಬೆರಳೆಣಿಕೆಯಷ್ಟು ಮಂದಿ ಅಧಿಕಾರಿಗಳು ಮಾತ್ರ ಬಂದಿದ್ದರಿಂದ ತಮಗೆ ಮತ್ತೆ ನ್ಯಾಯ ದೊರಕುವುದು ಮರಿಚೀಕೆಯಾಗಿದೆ. ಹೀಗಾಗಿ ಮತ್ತೆ ಪ್ರತಿಭಟನೆ ಮುಂದುವರಿಯುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next