Advertisement

ವಾರ್‌ ರೂಂ ಮುಂದೆ ಶಾಸಕಿ ಧರಣಿ

01:30 PM May 06, 2021 | Team Udayavani |

ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ಹಾಸಿಗೆ ವ್ಯವಸ್ಥೆ ಮಾಡಿ ಎಂದು ಜಯನಗರ ಶಾಸಕಿ ಸೌಮ್ಯರೆಡ್ಡಿ ಬುಧವಾರ ಬಿಬಿಎಂಪಿ ವಾರ್‌ ರೂಂ ಮುಂದೆ ಧರಣಿ ನಡೆಸಿದರು.

Advertisement

ಹಾಸಿಗೆ ಬ್ಲಾಕಿಂಗ್‌ ದಂಧೆ ತಡೆಗಟ್ಟಿ ಎಲ್ಲವನ್ನು ಸರಿಪಡಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ. ಜನರು ಹಾಸಿಗೆಗಾಗಿ ನನಗೆ ಮನವಿ ಮಾಡುತ್ತಿದ್ದಾರೆ ಎಂದು ಹಾಸಿಗೆ ಬೇಡಿಕೆಯ ಪಟ್ಟಿಯನ್ನು ತಂದು ಅಧಿಕಾರಿಗಳಿಗೆ ನೀಡಿದರು.

ಹಾಸಿಗೆ ಹಂಚಿಕೆಯಾಗದ ಕಾರಣ ಫ‌ುಟ್‌ಪಾತ್‌ನಲ್ಲೇ ಧರಣಿ ಕುಳಿತರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಸಮಸ್ಯೆ ಸರಿ ಮಾಡಿದೆ ಎಂದು ಹೇಳಿದ್ದೀರಿ, ಹಾಗಿದ್ದರೆ ಹಾಸಿಗೆ ಕೊಡಿಸಿ, ರೆಮ್‌ಡೆಸಿವಿಯರ್‌ ಕೊಡಿಸಿ ಎಂದು ಪ್ರಶ್ನಿಸಿದರು. ನನಗೆ ನಿಜವಾಗಲೂ ಅರ್ಥವಾಗುತ್ತಿಲ್ಲ ಎಲ್ಲಿ ಹೋಗಬೇಕು ನ್ಯಾಯ ಕೇಳಲು ಎಂದು . ನಾನು ಒಬ್ಬ ಶಾಸಕಿ. ಜನರು ಬಂದು ಕೇಳಿದರೆ ಏನು ಮಾಡಬೇಕು ಎಂದು ಕೇಳಿದರು.

ಜನರಿಗೆ ಸಹಾಯ ಮಾಡಿ. ಜಾತಿ, ಧರ್ಮ ಯಾಕೆ ಎಳೆದು ತರುತ್ತೀರಿ. ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ. ಹುಟ್ಟಿದಾಗ ಇದೇ ಜಾತಿ ಧರ್ಮಹುಟ್ಟಬೇಕು ಎಂದು ಅರ್ಜಿ ಹಾಕಿಕೊಳ್ಳುತ್ತೇವಾ ಎಂದು ಪ್ರಶ್ನಿಸಿದರು. 18 ರಿಂದ 44 ವರ್ಷದವರು ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದರು. ಎಷ್ಟು ಜನಕ್ಕೆ ಕೊಟ್ಟಿದ್ದೀರಿ. ಕೊರೊನಾ ತಪಾಸಣೆ ಮಾಡಿಸಿದರೆ ಎರಡು ದಿನವಾದರೂ ಫ‌ಲಿತಾಂಶ ಬರುವುದಿಲ್ಲ. ವಾರವಾದರೂ ಬಿಯು ಸಂಖ್ಯೆ ಸಿಗುವುದಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next