Advertisement

ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

12:11 PM Oct 06, 2020 | Suhan S |

ದೇವನಹಳ್ಳಿ: ನ್ಯಾ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಮತ್ತು ತಾಲೂಕು ಕರ್ನಾಟಕ ಮಾದಿಗ ದಂಡೋರ ಸಮುದಾಯ ವತಿಯಿಂದ ತಾಲೂಕಿನ ಜಿಲ್ಲಾಡಳಿತ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಕರ್ನಾಟಕ ಮಾದಿಗ ದಂಡೋರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯವರಿಗೆ ಸ್ಪಷ್ಟವಾಗಿ ಗೊತ್ತಿದೆ. ಅವರಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎಂಬುವುದು ಮನಸ್ಸಿನಲ್ಲಿದೆ. ಆದರೆ ಕಾಣದ ಕೈಗಳು ವರದಿ ಜಾರಿ ಮಾಡಲು ಬೀಡುತ್ತಿಲ್ಲ ಎಂದು ಆರೋಪಿಸಿದರು.

ನಿಜವಾದ ಪರಿಶಿಷ್ಟ ಜಾತಿ ಅಸೃಷ್ಯರಿಗೆ ಅನ್ಯಾಯವಾಗುತ್ತಿದೆ. ವರದಿ ಜಾರಿಗೆ ವಿರೋಧ ಮಾಡಿದರೆ, ಪರಿಶಿಷ್ಟ ಪಟ್ಟಿಯಿಂದ ನಿಮ್ಮನ್ನು ತೆಗೆದು ಹೊರಹಾಕ  ಬೇಕು ಎಂದು ಮುಂದಿನ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಮಾದಿಗ ಜಾತಿಗೆ ಮೀಸಲಾತಿಯಲ್ಲಿ ಎ,ಬಿ,ಸಿ,ಡಿ ವರ್ಗೀಕರಣ ಮಾಡಿಸಾಮಾಜಿಕ ನ್ಯಾಯ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದರು.

ಪ್ರಜಾ ವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿಜ್ಜ ವಾರ ನಾಗರಾಜ್‌ ಮಾತನಾಡಿ, ದೇವನಹಳ್ಳಿ ತಾಲೂಕಿನ ಮಾದಿಗ ಸಂಘಟನೆ ವತಿಯಿಂದ ಸದಾಶಿವ ಆಯೋಗವನ್ನು ಎಥಾವತ್ತಾಗಿ ಜಾರಿಗೊಳಿಸಲು ಪ್ರತಿಭಟನೆ ಹಮ್ಮಿಕೊಳ್ಳುವುದರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

Advertisement

ಬೆರಳೆಣಿಕೆಯಷ್ಟು ಇರುವ ಸ್ಪರ್ಶ ಜಾತಿಯ ಕೆಲವರು ಈ ಪರಿಶಿಷ್ಟ ಜಾತಿಗೆ ಬರುವ ಎಲ್ಲಾ ಅನುದಾನ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಬಹು ಸಂಖ್ಯಾತವಾಗಿರುವ ಮಾದಿಗ ಜನಾಂಗ ಹಿಂದುಳಿದಿದೆ ಎಂದರು.

ಬಿಕೆಎಸ್‌ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ. ಶಿವಪ್ಪ ಮಾತನಾಡಿ, ನಾಮಕಾವಸ್ಥೆಗೆ ಆದಿಜಾಂಭವ ನಿಗಮ ಸ್ಥಾಪಿಸಿ ಇದುವರೆಗೂ ಅಧ್ಯಕ್ಷ, ನಿರ್ದೇಶಕರನ್ನು ನೇಮಿಸಿಲ್ಲ. ಹಾಗೂ ಅನುದಾನ ಬಿಡುಗಡೆಗೊಳಿಸಿ ಎಂದು ಹೇಳಿದರು. ಈ ವೇಳೆ ಆದಿ ಜಾಂಭವ ಸೇವಾ ಟ್ರಸ್ಟ್‌ ಕೃಷ್ಣಮೂರ್ತಿ, ಅರುಂಧತಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳು, ಮಾತಂಗಾ ಮಹರ್ಷಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳು, ದಲಿತ ಸ್ವಾಭಿಮಾನಿ ಸಮಿತಿ ಪದಾಧಿಕಾರಿಗಳು, ಕರ್ನಾಟಕ ದಲಿತ ಜನಸೇನೆ ಪದಾಧಿಕಾರಿಗಳು, ಸಫಾಯಿ ಕರ್ಮಚಾರಿಕಾವಲುಸಮಿತಿಸಂಚಾಲಕ ಮ್ಯಾಥ್ಯು ಮುನಿಯಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next