Advertisement

ಸೌಲಭ್ಯಕ್ಕೆ ವಸತಿ ರಹಿತರ ಧರಣಿ

02:03 PM Sep 15, 2020 | Suhan S |

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಕೊಳಚೆ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪಂಗಡ,ಅಲೆಮಾರಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೋಮವಾರ ವಸತಿ ರಹಿತರು ಪ್ರತಿಭಟನೆ ನೆಡೆಸಿದರು.

Advertisement

ನಗರದ ವಿವಿಧೆಡೆಯಿಂದ ಆಗಮಿಸಿದ ವಸತಿ ರಹಿತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾವೇಶಗೊಂಡು ವಸತಿ ನೀಡ ಬೇಕೆಂದುಜಿಲ್ಲಾಡಳಿತವನ್ನುಒತ್ತಾಯಿಸಿದರು. ನಗರ ವ್ಯಾಪ್ತಿಯಲ್ಲಿ ಕೂಲಿ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ವಿವಿಧ ಸಮುದಾಯದ281ಕುಟುಂಬಗಳಿಗೆ ತುರ್ತಾಗಿ ಸರ್ಕಾರಿ ಭೂಮಿ ಗುರುತಿಸಿ ಮಂಜೂರು ಮಾಡಲು ಒತ್ತಾಯಿಸಿದರು.

ಈ ವೇಳೆ ನಮ್ಮ ಮನೆ ಹೋರಾಟ ಸಮಿತಿ ಮತ್ತು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿ ಕಾರ್ಯಕರ್ತರು ನಿವೇಶನ ರಹಿತರ ಪಟ್ಟಿ ಹಾಗೂ ರಾಜ್ಯಾದ್ಯಂತ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಸಂಪುಟ ಸಭೆಯ ನಿರ್ಣಯದಂತೆ ಮಾರ್ಗಸೂಚಿ ರೂಪಿಸಲು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕಎ.ನರಸಿಂಹಮೂರ್ತಿನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌, ಈ ಹಿಂದೆ ಕೊಳೆಗೇರಿ ಸಮಿತಿಯ ಕುಂದುಕೊರತೆ ಸಭೆಯಲ್ಲಿ ನಿವೇಶನ ರಹಿತರಿಗೆ ಭೂಮಿ ಗುರುತಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಇತ್ತೀಚೆಗೆ ಜಿಲ್ಲೆಗೆ ಕಂದಾಯ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ನಿವೇಶನ ರಹಿತರಿಗೆ ಭೂಮಿ ಗುರುತಿಸಿಕೊಡಲು ಸೂಚಿಸಿದ್ದಾರೆ ಎಂದರು.

ಸಂಸದರು, ನಗರ ಶಾಸಕರು ನಿವೇಶನ ರಹಿತ ಕುಟುಂಬಗಳಿಗೆ ವಸತಿ ಕಲ್ಪಿ ಸಲು ಸರ್ಕಾರಿ ಭೂಮಿಗಳನ್ನು ಗುರುತಿಸಲು ಒತ್ತಾಯಿಸುತ್ತಿದ್ದು, ಕೊಳೆಗೇರಿ ಸಮಿತಿ ನೀಡಿರುವ ನಿವೇಶನ ರಹಿತರ ಪಟ್ಟಿಯನ್ನು ಪರಿಶೀ ಲಿಸಿ ಅರ್ಹ ಕುಟುಂಬಗಳಿಗೆ ನಿವೇಶನ ನೀಡಲು ಕ್ರಮವಹಿಸಲಾಗುವುದು. ಇದಕ್ಕೆ ಬೇಕಿರುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

Advertisement

ಕೋವಿಡ್ ನ ಈ ಸಂಕಷ್ಟದಲ್ಲಿ ಬಾಡಿಗೆ ಮನೆಗಳಲ್ಲಿರುವ ಕುಟುಂಬಗಳಿಗೆ ಮಾಲೀಕರು ಕಿರುಕುಳ ನೀಡಬಾರದು ಇಂತಹ ದೂರುಗಳಿದ್ದಲ್ಲಿ ಖುದ್ದು ಭೇಟಿ ಮಾಡುವಂತೆ ತಿಳಿಸಿದರು.

ನಂತರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಹೊಂಬಯ್ಯನ ಪಾಳ್ಯದ ಶ್ವೇತಾ ಶಿರಾ ಗೇಟ್‌ ನಲ್ಲಿ40 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿ ದುಡಿಮೆಯಿಲ್ಲದೇ ನನ್ನ ಮಾಂಗಲ್ಯ ಮಾರಿ ಬಾಡಿಗೆ ಹಣ ಕಟ್ಟಿದ್ದೇನೆ ಎಂದು ಅಳಲು ತೋಡಿಕೊಂಡರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸ್ಲಂ ಜನಾಂದೋಲನಾ ಸಂಚಾಲಕರ ಎ,ನರಸಿಂಹ ಮೂರ್ತಿ ಮಾತನಾಡಿ ಕಳೆದ 20 ವರ್ಷ ಗಳಿಂದ ರಾಜ್ಯದಲ್ಲಿ ನಿವೇಶನ ನೀಡುವ ಪ್ರಕ್ರಿಯೆ ನಗರಪ್ರದೇಶಗಳಲ್ಲಿ ಸ್ಥಬ್ದಗೊಂಡಿದೆ, ದುರ್ಬಲ ವರ್ಗಗಳಿಗೆ ಮತ್ತು ನಗರ ಪ್ರದೇಶದಲ್ಲಿರುವ ನಿವೇಶನ ರಹಿತರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಕಲಂ 18ಎ ರಡಿಯಲ್ಲಿ ಸರ್ಕಾರಿ ಭೂಮಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಅದರಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಗಳ ವಿವರವನ್ನು ಫ‌.5 ರಂದು ಸ್ಲಂ ಜನರಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದು ತಕ್ಷಣಕ್ಕೆ 281 ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಬೇಕು ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದಶಂಕರಯ್ಯ , ಮೊಹಮ್ಮದ್‌ ಹಯತ್‌, ತಿರು ಮಲಯ್ಯ, ರಂಗನಾಥ್‌,ಮೋಹನ್‌, ಶಾರ ದಮ್ಮ, ಗಂಗಮ್ಮ, ಪುಟ್ಟರಾಜು ಹಾಗೂ ನಮ್ಮ ಮನೆ ಹೋರಾಟ ಸಮಿತಿಯ ಮಂಗಳಮ್ಮ, ಚಂದ್ರಿಕಾ,ಹನುಮಕ್ಕ, ಸುನಂದಮ್ಮ, ಗೋಪಾಲಯ್ಯ ಸೇರಿದಂತೆ ವಸತಿ ರಹಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next