Advertisement
ರೈತರ ಬಿಲ್ ದೇಶದ ಅನ್ನದಾತ ರೈತರ ವಿರುದ್ಧವಾಗಿರುತ್ತದೆ. ಈ ಬಿಲ್ ಜಾರಿಗೆ ಬಂದರೆ ಎಪಿಎಂಸಿ ಯಾರ್ಡ್ಗಳು ಹಾಗೂ ಮಾರುಕಟ್ಟೆಗಳನ್ನು ತಗೆದುಹಾಕುವ ಕೆಲಸ ಮಾಡಲಾಗುತ್ತದೆ. ದೇಶದಲ್ಲಿ ಶೇ. 86% ಹೆಚ್ಚು ರೈತರು 5 ಎಕರೆಗಳಿಂತ ಕಡಿಮೆ ಭೂಮಿ ಹೊಂದಿರುತ್ತಾರೆ. ಇದರಿಂದಾಗಿ ಸಣ್ಣಪುಟ್ಟ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಕಡಿಮೆ ಬೆಳಗಳನ್ನು ಎಲ್ಲಿ ಮಾರಾಟ ಮಾಡಬೇಕು ಹಾಗೂ ಎಲ್ಲಿ ದಾಸ್ತಾನು ಮಾಡಬೇಕು ಎಂಬುದರ ಬಗ್ಗೆ ಗೊಂದಲಗಳು ಇವೆ. ಈ ಬಿಲ್ನಲ್ಲಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಈ ಬಿಲ್ಲನ್ನು ಜಾರಿಗೆ ತಂದರೆ ಎಪಿಎಂಸಿ ಹಾಗೂ ಮಾರ್ಕೆಟ್ ಗಳು ಇಲ್ಲದೇ ರೈತರು ಎಲ್ಲಿ ಬೆಳೆಗಳನ್ನು ಮಾರಾಟ ಮಾಡಬೇಕು? ಹಾಗೂ ಎಲ್ಲಿ ದಾಸ್ತಾನು ಮಾಡಬೇಕು? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾನಿರತ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಆಗ್ರಹಿಸಿದರು.
Advertisement
ಸಂಸದರ ಅಮಾನತು ಖಂಡಿಸಿ ಧರಣಿ
07:47 PM Sep 22, 2020 | Suhan S |
Advertisement
Udayavani is now on Telegram. Click here to join our channel and stay updated with the latest news.