Advertisement

ರೈಲ್ವೆ ಖಾಸಗೀಕರಣ ವಿರೋಧಿಸಿ ಧರಣಿ

08:57 AM Aug 11, 2020 | Suhan S |

ಅರಸೀಕೆರೆ: ರೈಲ್ವೆ ಖಾಸಗೀಕರಣ ವಿರೋಧಿಸಿ ಸೌತ್‌ ವೆಸ್ಟರ್ನ್ ರೈಲ್ವೆ ಮಜ್ದೂರ್‌ ಯೂನಿಯನ್‌ ಸಂಘಟನೆಯ ಪದಾಧಿಕಾರಿಗಳು ನಗರದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

Advertisement

ಸ್ಥಳೀಯ ಯೂನಿಯನ್‌ ಅಧ್ಯಕ್ಷ ಆಲ್ಬರ್ಟ್‌ಅನಿಲ್‌ ಮಾತನಾಡಿ, ದೇಶದಲ್ಲಿಯೇ ಬಹುದೊಡ್ಡ ಸಂಪರ್ಕ ಜಾಲ ಹೊಂದಿರುವ ರೈಲ್ವೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟ ಕರ ಸಂಗತಿಯಾಗಿದೆ ಎಂದರು. ಇಂತಹ ಬೆಳವಣಿಗೆಯಿಂದಾಗಿ ಮುಂಬರುವ ದಿನಗಳಲ್ಲಿ ಸಹಸ್ರಾರು ನೌಕರರು ಉದ್ಯೋಗ ಕಳೆದು ಕೊಂಡು ಇಡೀ ವ್ಯವಸ್ಥೆ ಖಾಸಗಿಯವರ ತೆಕ್ಕೆಗೆ ಬೀಳುವ ಅಪಾಯವಿದ್ದು ದೇಶಾದ್ಯಂತ ರೈಲ್‌ ಬಚಾವೋ, ದೇಶ್‌ ಬಚೋವೋ ಆಂದೋಲನದ ಮೂಲಕ ಬೃಹತ್‌ ಹೋರಾಟ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಖಾಸಗೀಕರಣ ನಿರ್ಧಾರದಿಂದ ಹೊರಬರಬೇಕು. ಇಲ್ಲದಿದ್ದಲ್ಲಿ ಹೋರಾಟದ ಸ್ವರೂಪ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ಅಲ್ತಾಪ್‌, ಕಾರ್ಯದರ್ಶಿ ಪ್ರಭುಕುಮಾರ್‌, ಶಶಿಧರನ್‌, ಕುಮಾರಸ್ವಾಮಿ, ಸಂತೋಷ್‌, ಪಾಲಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next