Advertisement

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

03:02 PM Apr 01, 2022 | Team Udayavani |

ಬೀದರ: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಕುಂಬಾರವಾಡ ಕ್ರಾಸ್‌ ಸಮೀಪ ಪ್ರತಿಭಟನೆ ನಡೆಸಿದರು.

Advertisement

ರಸ್ತೆ ಪಕ್ಕದಲ್ಲಿ ಬೈಕ್‌, ಕಾರು ಹಾಗೂ ಸಿಲಿಂಡರ್‌ ಇಟ್ಟು ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಆಡಳಿತ ಅವಧಿಯಲ್ಲಿ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಕಾರಣ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಹಲವಾರು ಬಾರಿ ಬೆಲೆ ಏರಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ ಕೂಡ ಬೆಲೆ ಏರಿಕೆಯಿಂದ ಹೊರತಾಗಿಲ್ಲ. ಹೀಗಾಗಿ “ಅಚ್ಛೆ ದಿನ್‌’ ಯಾರಿಗೂ ಬಂದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬುಡಾ ಮಾಜಿ ಅಧ್ಯಕ್ಷ ಸಂಜಯ್‌ ಜಾಗೀರದಾರ್‌ ಟೀಕಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ ಬೆಲೆ ಇಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕೆಂದು ಆಗ್ರಹಿಸಿದರು.

ಪ್ರಮುಖರಾದ ಅಮರ ಸೂರ್ಯವಂಶಿ, ನಾಗಸೇನ ಗಾಯಕವಾಡ್‌, ನವೀನ್‌ ಡ್ಯಾನಿಯಲ್‌, ಜಾಕೋಬ್‌ ಮುಸ್ತಾಪೂರಕರ್‌, ಪ್ರವೀಣಕುಮಾರ ಬಿ.ಕೆ.ಶರಣಪ್ಪ ಯದಲಾಪುರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next