Advertisement

ಶಾಸಕ ರೇಣುಕಾಚಾರ್ಯ ವಿರುದ್ದ ಪ್ರತಿಭಟನೆ

01:16 PM Mar 30, 2022 | Team Udayavani |

ಸುರಪುರ: ಬೇಡ ಜಂಗಮರ ಹೆಸರಿನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತು ಅವರ ಮಕ್ಕಳು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಗಾಂಧಿ ವೃತ್ತದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಸಚಿವರಾಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ, ಶಾಸಕರಾಗಿ ರೇಣುಕಾಚಾರ್ಯ ಅವರು ಸರ್ಕಾರಕ್ಕೆ ಮೋಸ ಮಾಡಿ ತನ್ನ ಸಹೋದರ, ಸಹೋದರಿ ತನ್ನ ಇಬ್ಬರು ಮಕ್ಕಳು ಮತ್ತು ತಾವೂ ಬೇಡ ಜಂಗಮ ಪರಿಶಿಷ್ಟ ಪ್ರಮಾಣ ಪತ್ರ ಪಡೆದಿರುವುದು ಖಂಡನೀಯ ಎಂದರು.

ಪ್ರಮಾಣ ಪತ್ರ ಪಡೆದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಖೊಟ್ಟಿ ಜಾತಿ ಪ್ರಮಾಣ ಪತ್ರ ನೀಡಿರುವ ತಹಶೀಲ್ದಾರ್‌ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರಿಗೆ ಬರೆದ ಮನವಿಯನ್ನು ಶಿರಸ್ತೇದಾರ ಸೋಮನಾಥ ದೊರೆ ಅವರಿಗೆ ಸಲ್ಲಿಸಿದರು. ಮಾನಪ್ಪ ಬಿಜಾಸಪುರ, ಹನುಮಂತ ಬಾಂಬೆ, ಬುದ್ಧಿವಂತ ನಾಗರಾಳ, ಜಟ್ಟೆಪ್ಪ ನಾಗರಾಳ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಳ್ಳಿ, ಬಸವರಾಜ ದೊಡ್ಡಮನಿ, ಖಾಜಾ ಹುಸೇನ್‌ ಗುಡಗುಂಟಿ, ಹುಲಗಪ್ಪ ಜಾಂಗೀರ, ದ್ಯಾವಪ್ಪ ಚಲುವಾದಿ, ಮರಿಲಿಂಗಪ್ಪ ದೇವಿಕೇರಿ, ಮಹೇಶ ಯಾದಗಿರಿ, ಹನೀಫ್‌ ಗುಡಗುಂಟಿ, ಭೀಮಣ್ಣ ಮಾಲಗತ್ತಿ, ಬನ್ನಪ್ಪ ಕೋನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next