Advertisement

ಎಂಇಎಸ್‌ ವಿರುದ್ಧ ಪ್ರತಿಭಟನೆ

05:43 PM Dec 16, 2021 | Shwetha M |

ಮುದ್ದೇಬಿಹಾಳ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್‌ ಸಂಘಟನೆಯವರು ಕರ್ನಾಟಕದ ನಾಡಧ್ವಜ ಸುಟ್ಟು ಹಾಕಿದ್ದನ್ನು ಖಂಡಿಸಿ ಬಿ.ವೈ. ವಿಜಯೇಂದ್ರ ಯುವ ಬ್ರಿಗೇಡ್‌ನ‌ ವಿಜಯಪುರ ಜಿಲ್ಲೆ ಮತ್ತು ಮುದ್ದೇಬಿಹಾಳ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಸಮಾಜ ಸೇವಕ ಮಹಾಂತೇಶ ಬೂದಿಹಾಳಮಠ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಇದುವರೆಗೂ ಬೇರೆ ರಾಜ್ಯದ ಭಾಷೆಗಳ ಮೇಲೆ ಗದಾ ಪ್ರಹಾರ ಮಾಡಿಲ್ಲ. ಆದರೆ ಬೇರೆ ರಾಜ್ಯದವರು ಕನ್ನಡದ ಬಗ್ಗೆ, ಕನ್ನಡದ ಧ್ವಜದ ಬಗ್ಗೆ ಅವಮಾನಕರ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಎಂಇಎಸ್‌ನವರು ಕನ್ನಡದ ಧ್ವಜವನ್ನು ಸುಟ್ಟು ನಮ್ಮ ಭಾಷೆಯನ್ನು ಅವಮಾನಿಸಿರುವುದಕ್ಕೆ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.

ಬ್ರಿಗೇಡ್‌ನ‌ ಜಿಲ್ಲಾಧ್ಯಕ್ಷ ವಿಲಾಸ ಮೇಲ್ಮನಿ, ಕಿರುತೆರೆ ಹಾಸ್ಯ ಕಲಾವಿದ ಮುನೀರ್‌ ಅವಟಿಗೇರ, ವಿವಿಧ ಕನ್ನಡಪರ ಮತ್ತು ರೈತ ಪರ ಸಂಘಟನಗಳ ಮುಖಂಡರಾದ ರಮೇಶ ಕರಡ್ಡಿ, ಬಸವರಾಜ ಮೇಟಿ, ಮಹಾದೇವ ಬಿರಾದಾರ, ವಾಸಿಂ ದೇಸಾಯಿ, ಸೊಹೇಲ್‌ ಬೇಪಾರಿ, ಚನ್ನಬಸವರಾಜ ಅಂಗಡಿ, ಸಾಗರ ವಾಲೀಕಾರ, ರಶೀದ ನದಾಫ್‌, ಬಸು ಮದರಿ, ಗುರುಮಠ ಸೇರಿ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next