Advertisement

ಎಂಇಎಸ್‌ ವಿರುದ್ಧ ಇಂಗಳೇಶ್ವರದಲ್ಲಿ ಪ್ರತಿಭಟನೆ

05:59 PM Dec 26, 2021 | Shwetha M |

ಬಸವನಬಾಗೇವಾಡಿ: ಬಸವಣ್ಣ, ರಾಯಣ್ಣ, ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಸಿ ಬಳಿದು ಅಪಮಾನ ಮಾಡಿದ ಎಂಇಎಸ್‌ ಹಾಗೂ ಶಿವಸೇನೆ ಕಾರ್ಯಕರ್ತರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಇಂಗಳೇಶ್ವರದಲ್ಲಿ ಗ್ರಾಮಸ್ಥರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಮಹಾಪುರುಷರ ಪ್ರತಿಮೆಗಳಿಗೆ ಅವಮಾನ ಮಾಡುವುದು ಮತ್ತು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಂಸ್ಕೃತಿಯಲ್ಲ. ಈ ದೇಶದಲ್ಲಿ ಪ್ರತಿಯೊಬ್ಬರೂ ಸಂಸ್ಕೃತಿ ಸಂಪ್ರದಾಯ ಅರಿತುಕೊಂಡು ನಡೆಯಬೇಕು. ಇಂಥ ದುಷ್ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಅಪ್ಪು ಪತಂಗಿ, ಸಿದ್ದಲಿಂಗಪ್ಪ ಸಜ್ಜನ, ಎಸ್‌.ಬಿ. ನಡಕಟ್ಟಿ, ಸಿ.ಎಲ್‌. ಮೆಲಿನಮನಿ, ಈರಣ್ಣ ಸಜ್ಜನ, ಅಪ್ಪಾಸಾಹೇಬ ಕುಲಕರ್ಣಿ, ನಾಗಣ್ಣ ಚಿಗರಿ, ಈರಪ್ಪ ಕಡಗೋಲ, ಬಾಬು ಜುಮನಾಳ, ಅಣ್ಣಪ್ಪ ವಡ್ಡರ, ಬಿ.ಎಸ್‌. ಬಿರಾದಾರ, ಪರಶುರಾಮ ಮಾದರ, ಬಸಪ್ಪ ಬಡಿಗೇರ, ಶಿವಪ್ಪ ಅವಟಿ, ಈರಣ್ಣ ಬೆಕಿನಾಳ, ಮುರುಗೇಶ ಹದಿಮೂರ, ದುಂಡಪ್ಪ ಐಗಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next