Advertisement
ತಮ್ಮ ಕೆಲಸದ ಸ್ಥಳಗಳಲ್ಲಿ ಕಾರ್ಮಿಕ,ಕೃಷಿ, ಅಗತ್ಯ ವಸ್ತುಗಳ ತಿದ್ದುಪಡಿಕಾಯ್ದೆ, ಎಪಿಎಂಸಿ ಕಾಯ್ದೆ, ಹೊಸಶಿಕ್ಷಣ ನೀತಿ ಕಾಯ್ದೆಯ ಪ್ರತಿಗಳನ್ನುಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಅಂಗನವಾಡಿ ನೌಕರರು,ಹಮಾಲಿ ಕಾರ್ಮಿಕರು, ಶಿಲ್ಪಾಮಡಿಕೇರ್ ಕಾರ್ಮಿಕರು, ರಾಯ್ ಕೆಮ್, ಟ್ರೆçಮ್ಯಾಕ್ಸ್, ಜಯಂತ್ ಮತ್ತು ವೈಟಿಪಿಎಸ್ ಕಾರ್ಮಿಕರು ಕಾರ್ಖಾನೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
Related Articles
Advertisement
ಲಿಂಗಸುಗೂರು: ಕೇಂದ್ರ- ರಾಜ್ಯ ಸರ್ಕಾರಗಳ ಕೃಷಿ ನೀತಿ ವಿರೋಧಿಸಿ ಸಿಐಟಿಯು ಮುಖಂಡರು ಶುಕ್ರವಾರಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿಕರಡು ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ, ರೈತರ ಜಮೀನುಗಳ ಪರಭಾರೆ ಸೇರಿದಂತೆ ಕೃಷಿ ವಿರೋಧಿ ಕಾನೂನು ಜಾರಿ ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಒಕ್ಕಲುತನ ನಾಶ ಮಾಡಲುಹೊರಟಿದೆ. ಇದನ್ನು ಮನಗಂಡುಪಂಜಾಬ, ಹರಿಯಾಣ, ಉತ್ತರಪ್ರದೇಶರೈತರು ರಾಜಧಾನಿ ದೆಹಲಿಯಲ್ಲಿ ಉಗ್ರಹೋರಾಟ ನಡೆಸುತ್ತಿದ್ದಾರೆ. ಆದರೂಕೇಂದ್ರ ಸರ್ಕಾರ ಬಂಡವಾಳಶಾಹಿಗಳಪರವಾದ ಕಾನೂನು ಜಾರಿಗೊಳಿಸಲುಹೋರಾಟ ಹತ್ತಿಕ್ಕಲು ಮುಂದಾಗಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ನಡೆಸುತ್ತಿರುವಹೋರಾಟ ದೇಶಾದ್ಯಂತವಿಸ್ತರಣೆಯಾಗುವ ಮೊದಲು ಕೇಂದ್ರಸರ್ಕಾರ ಎಚ್ಚೆತ್ತು ಉದ್ದೇಶಿತ ಕೃಷಿಕಾಯ್ದೆಗಳ ಜಾರಿ ಕೈಬಿಟ್ಟು ರೈತರಹಿತಕಾಯಬೇಕೆಂದು ಆಗ್ರಹಿಸಿದರು.ಈ ವೇಳೆ ಸಿಐಟಿಯುನ ಮಹ್ಮದಹನೀಫ್, ಗ್ರಾಪಂ ಸದಸ್ಯ ರಮೇಶವೀರಾಪುರ, ಬಾಬಾಜಾನಿ, ಮಾನಪ್ಪಲೆಕ್ಕಿಹಾಳ, ಸದ್ದಾಂ ಹುಸೇನ ಮುದಗಲ್, ಸಾವಿತ್ರಿ ಚೆನ್ನೂರಕರ್, ಹುಸೇನ ಬಾನು, ಸುನೀತಾ, ಗುರಪ್ಪ ನಾಯಿಕೊಡಿ, ಬೀಬಿ, ಅರುಂದಾ ಇತರರು ಇದ್ದರು.