Advertisement

ಮಸೂದೆ ಪ್ರತಿ ಸುಟ್ಟು ರೈತರ ಆಕ್ರೋಶ

04:37 PM Sep 27, 2020 | Suhan S |

ಬೀದರ: ರೈತರನ್ನು ಸಂಕಷ್ಟಕ್ಕೆ ತಳ್ಳುವ ಮಸೂದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದಿಂದ ಶನಿವಾರ ನಗರದ ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಮಸೂದೆಗಳ ಪ್ರತಿಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಂಸದ ಭಗವಂತ ಖೂಬಾ ಅವರಿಗೆ ಬರೆದ ಮನವಿ ಪತ್ರವನ್ನು ಆಪ್ತ ಸಹಾಯಕರಿಗೆ ಸಲ್ಲಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ  ಕಾನೂನು ರೂಪಿಸಿ ಅನ್ನದಾತರನ್ನು ಕನಿಷ್ಠ ದರ್ಜೆಯಲ್ಲಿ ಕಾಣುತ್ತಿರುವುದು ಸರಿಯಲ್ಲ. ಹೆಸರು ಮತ್ತು ಉದ್ದು ಖರೀದಿಯಲ್ಲಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿ, ಇನ್ನೊಂದೆಡೆ 20 ಕ್ವಿಂಟಲ್‌ನಿಂದ 4 ಮತ್ತು 6 ಕ್ವಿಂಟಲ್‌ ಖರೀದಿಸುತ್ತಿದೆ. ಇದರಿಂದ ಸರ್ಕಾರದ ನಿಲುವು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಜಿಲ್ಲೆಯ ರೈತರು ಸತತವಾಗಿ ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡು ಸಾಲಕ್ಕೆ ಸಿಲುಕುತ್ತಿದ್ದಾರೆ. ರಾಷ್ಟ್ರೀಕೃತ ಸೇರಿ ಎಲ್ಲ ಬ್ಯಾಂಕ್‌ ನಲ್ಲಿನ ರೈತರ ಸಾಲ ಮನ್ನಾ ಮಾಡಿ ಹೊಸ ಸಾಲ ಕೊಡಬೇಕು ಹಾಗೂ ರೈತರಿಗೆ ಮಾರಕವಾಗುವಂತಹ ಎಪಿಎಂಸಿ ಕಾಯ್ದೆ ಭೂ ಕಾಯ್ದೆ ಮತ್ತು ವಿದ್ಯುತ್‌ ಕಾಯ್ದೆಗಳನ್ನು ರದ್ದುಪಡಿಸಬೇಕು. ಸಂಸದರು ಸರ್ಕಾರದ ನೀತಿಗಳನ್ನು ವಿರೋ ಧಿಸಿ ರೈತರ ಧ್ವನಿಯಾಗಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ವಿಶ್ವನಾಥ ಚಿಲಶೆಟ್ಟಿ, ನಾಗೇಂದ್ರಪ್ಪ ತರನಳ್ಳಿ, ಪ್ರಕಾಶ ಅಲ್ಮಾಜೆ, ಹಾವಗಿರಾವ್‌ ವಟಗೆ, ಸಂಗಶೆಟ್ಟಿ ಖೇಡ, ಪ್ರಭುದಾಸ ಸಂತಪುರ, ನಾಗಶೆಟ್ಟಪ್ಪಾ ಲಂಜವಾಡೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next