Advertisement

ಗಿಡ-ಮರಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

05:21 PM Nov 23, 2021 | Team Udayavani |

ದೇವದುರ್ಗ: ಸಮೀಪದ ಭೂಮನಗುಂಡ ಗ್ರಾಮದ ರೈತರಿಗೆ ಐಸಿಐಸಿಐ ಫೌಂಡೇಶನ್‌ ವತಿಯಿಂದ ತೋಟಗಾರಿಕೆ ಹಾಗೂ ಅರಣ್ಯ ಗಿಡಗಳನ್ನು ಸೋಮವಾರ ಉಚಿತವಾಗಿ ವಿತರಿಸಲಾಯಿತು. ಪ್ರತಿ ರೈತರಿಗೆ 200 ಸಸಿಗಳನ್ನು ನೀಡಿ ಅದರ ಪಾಲನೆ, ಪೋಷಣೆ ಮತ್ತು ನೆಡುವ ಬಗ್ಗೆ ಫೌಂಡೇಶನ್‌ನ ಯಶೋಧಾ ಸಂಪೂರ್ಣ ಮಾಹಿತಿ ನೀಡಿದರು.

Advertisement

ತಾಪಂ ಮಾಜಿ ಸದಸ್ಯ ಹನುಮಯ್ಯ ಅರಳೆಬಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ಫೌಂಡೇಶನ್‌ ಅಭಿವೃದ್ಧಿ ಅಧಿಕಾರಿ ನರಸಿಂಹಪ್ಪ ಜಿ, ಗ್ರಾಮಸ್ಥರಾದ ಬಸವರಾಜ ನಾಯಕ, ಸಿದ್ದರಾಮೇಶ, ಪರಶುರಾಮ, ಶಿವರಾಜ, ಫೌಂಡೇಶನ್‌ನ ಸುರೇಶ, ಮಹಾದೇವ, ಮಹೇಶ್ವರಪ್ಪ, ರಂಗಮ್ಮ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next