Advertisement

ನಾಯಿ ಬಾಯಿಗೆ ಸಿಕ್ಕಿ ಗಾಯಗೊಂಡ ಮರಬೆಕ್ಕುಗಳ ರಕ್ಷಣೆ

03:14 PM Jul 16, 2018 | |

ಪುಂಜಾಲಕಟ್ಟೆ : ನಾಯಿಯ ಬಾಯಿಗೆ ಸಿಕ್ಕಿ ಗಾಯಗೊಂಡ ನಾಲ್ಕು ಮರಬೆಕ್ಕುಗಳನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಮಂಗಳೂರು ಪಿಲಿಕುಳ ನಿಸರ್ಗ ಧಾಮಕ್ಕೆ ಹಸ್ತಾಂತರಿಸಿದ್ದಾರೆ. ಮಣಿನಾಲ್ಕೂರು ಗ್ರಾಮದ ಅಂಬೇಡ್ಕರ್‌ ಕಾಲನಿಯ ಪ್ರಕಾಶ್‌ ಅವರ ಅಡಿಕೆ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಮರಬೆಕ್ಕು ಕಾಣಸಿಕ್ಕಿತ್ತು. ಪ್ರಕಾಶ್‌ ಅವರ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಸಿಬಂದಿ ಮನೋಜ್‌ ಮತ್ತು ಉರಗತಜ್ಞ ಸ್ನೇಕ್‌ ಕಿರಣ್‌ ಅವರು ಸ್ಥಳಕ್ಕೆ ತೆರಳಿ ನಾಲ್ಕು ಮರಬೆಕ್ಕುಗಳನ್ನು ರಕ್ಷಣೆ ಮಾಡಿದ್ದಾರೆ.

Advertisement

ಮೂರು ಮರಿಗಳನ್ನು ಪೊದೆಯಲ್ಲಿಟ್ಟು ಆಹಾರಕ್ಕಾಗಿ ಅಡಿಕೆ ತೋಟದಲ್ಲಿದ್ದ ಹಲಸಿನ ಮರ ಏರಿದಾಗ ಮರಬೆಕ್ಕು ಹತೋಟಿ ತಪ್ಪಿ ಮರದಿಂದ ಕೆಳಗೆ ಬಿದ್ದು ನಾಯಿಯ ದಾಳಿಗೊಳಗಾಗಿ ಗಾಯಗೊಂಡಿತ್ತು. ಅವುಗಳ ರಕ್ಷಣೆಯ ಬಳಿಕ ತಾಯಿ ಬೆಕ್ಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಪಿಲಿಕುಳ ವನ್ಯಜೀವಿಗಳ ಧಾಮಕ್ಕೆ ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next