Advertisement

ತಾಜ್‌ಮಹಲ್‌ ಮಾದರಿ ರಕ್ಷಣೆ ನೀಡಿ: ಭಟ್ಟಾರಕ ಸ್ವಾಮೀಜಿ

06:25 AM Feb 26, 2018 | Team Udayavani |

ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿ ಹಾಗೂ ಶ್ರೀ ಬಾಹುಬಲಿಮೂರ್ತಿಗೆ ಆಗ್ರಾದ ತಾಜ್‌ ಮಹಲ್‌ ಮಾದರಿಯಲ್ಲಿ ರಕ್ಷಣೆ ನೀಡಬೇಕೆಂದು ಜೈನ ಮಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕೇಂದ್ರ ಗೃಹ ಸಚಿವ ರಾಜನಾಥ್‌
ಸಿಂಗ್‌ ಅವರನ್ನು ಒತ್ತಾಯಿಸಿದರು.

Advertisement

ಶ್ರವಣಬೆಳಗೊಳದ ಜೈನಮಠದ ಆವರಣದಲ್ಲಿರುವ ಚಾವುಂಡರಾಯ ವೇದಿಕೆಯಲ್ಲಿ ಭಾನುವಾರ ನಡೆದ ರಜತ ಜಯಧ್ವಜ,ವಿಜಯಧ್ವಜಗಳನ್ನು ಶ್ರೀ ಬಾಹುಬಲಿಮೂರ್ತಿಗೆ ಸಮರ್ಪಣೆ ಮಾಡಿದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಆವರು, ವಿಶ್ವದ ಏಕೈಕ ಏಕ ಶಿಲಾಮೂರ್ತಿಗೆ ತಾಜ್‌ಮಹಲ್‌ ಮಾದರಿಯಲ್ಲಿ ಕೇಂದ್ರ ಸರ್ಕಾರವು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಆಗತ್ಯವಿದೆ. ಈ ನಿಟ್ಟಿನಲ್ಲಿ ರಾಜನಾಥ್‌ ಸಿಂಗ್‌ ಅವರು ಕ್ರಮ ಕೈಗೊಳ್ಳಬೇಕೆಂದು ನಿವೇದಿಸಿದರು. ಲಿಖೀತ ಮನವಿ ಸಲ್ಲಿಸಿದ ಮಹಾಮಸ್ತಕಾಭಿಷೇಕ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಜಿತೇಂದ್ರಕುಮಾರ್‌ ಅವರು, ಕೇಂದ್ರ ಸರ್ಕಾರವು ಶ್ರವಣಬೆಳಗೊಳದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next