ಸಿಂಗ್ ಅವರನ್ನು ಒತ್ತಾಯಿಸಿದರು.
Advertisement
ಶ್ರವಣಬೆಳಗೊಳದ ಜೈನಮಠದ ಆವರಣದಲ್ಲಿರುವ ಚಾವುಂಡರಾಯ ವೇದಿಕೆಯಲ್ಲಿ ಭಾನುವಾರ ನಡೆದ ರಜತ ಜಯಧ್ವಜ,ವಿಜಯಧ್ವಜಗಳನ್ನು ಶ್ರೀ ಬಾಹುಬಲಿಮೂರ್ತಿಗೆ ಸಮರ್ಪಣೆ ಮಾಡಿದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಆವರು, ವಿಶ್ವದ ಏಕೈಕ ಏಕ ಶಿಲಾಮೂರ್ತಿಗೆ ತಾಜ್ಮಹಲ್ ಮಾದರಿಯಲ್ಲಿ ಕೇಂದ್ರ ಸರ್ಕಾರವು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಆಗತ್ಯವಿದೆ. ಈ ನಿಟ್ಟಿನಲ್ಲಿ ರಾಜನಾಥ್ ಸಿಂಗ್ ಅವರು ಕ್ರಮ ಕೈಗೊಳ್ಳಬೇಕೆಂದು ನಿವೇದಿಸಿದರು. ಲಿಖೀತ ಮನವಿ ಸಲ್ಲಿಸಿದ ಮಹಾಮಸ್ತಕಾಭಿಷೇಕ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಜಿತೇಂದ್ರಕುಮಾರ್ ಅವರು, ಕೇಂದ್ರ ಸರ್ಕಾರವು ಶ್ರವಣಬೆಳಗೊಳದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.