Advertisement

ರೈತರು, ಜನರನ್ನು ಕಚೇರಿಗಳಿಗೆ ಅಲೆಸಬೇಡಿ

12:23 PM Feb 06, 2022 | Team Udayavani |

ದೇವನಹಳ್ಳಿ: ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ರೈತರನ್ನು ಕಚೇರಿಗಳಿಗೆ ಅಲೆದಾಡಿಸುವುದನ್ನು ಅಧಿಕಾರಿಗಳು ಬಿಡಬೇಕು. ಸರಿಯಾದ ಸಮಯಕ್ಕೆ ಕೆಲಸ ಕಾರ್ಯಗಳು ಆಗಬೇಕು ಎಂದು ಶಾಸಕ ಎಲ್‌. ಎನ್‌.ನಾರಾಯಣಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಜನರನ್ನು ನಾಳೆ ಬನ್ನಿ, ಇವತ್ತು ಬನ್ನಿ ಎಂದು ಸತಾಯಿಸದೇ ಯಾವ ಇಲಾಖೆಯಲ್ಲಿ ಕೆಲಸ ಆಗಬೇಕು ಎಂಬುದನ್ನು ತಿಳಿಸಿ. ಜಿಲ್ಲಾಧಿಕಾ ರಿಗಳ ಹತ್ತಿರ ಹೋಗಬೇಕು ಎಂದು ಹೇಳಬೇಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದರೆ ತಾಲೂಕು ಅಭಿವೃದ್ಧಿ ಸಾಧ್ಯ. ತಾಲೂಕಿನಲ್ಲಿ ಯಾವುದೇ ಸರ್ಕಾರದ ಸೌಲಭ್ಯ ಒದಗಿಸುವ ಮುನ್ನ ನಮ್ಮ ಗಮನಕ್ಕೆ ತನ್ನಿ. ಅರ್ಹ ಫ‌ಲಾನುಭವಿಗಳಿಗೆ ಸೌಲಭ್ಯಗಳು ತಲುಪುವಂತೆ ಆಗಬೇಕು. ಅಂಗನವಾಡಿಮತ್ತು ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಜಾಗದಕೊರತೆಯಿದ್ದರೆ ತಕ್ಷಣ ಜಾಗ ಗುರ್ತಿಸಬೇಕು.ವಿಜಯಪುರ ಮತ್ತು ದೇವನಹಳ್ಳಿ ಪಟ್ಟಣಗಳಲ್ಲಿ ಅಂಗನವಾಡಿಗಳಿಗೆ ಜಾಗದ ಕೊರತೆಯಿದ್ದು ಕೂಡಲೇ ಪುರಸಭಾ ಮುಖ್ಯಾಧಿಕಾರಿಗಳು ಜಾಗವನ್ನು ಗುರ್ತಿಸಿ ಸಂಬಂಧಪಟ್ಟ ಇಲಾಖೆಗೆ ನೀಡಬೇಕು ಎಂದು ಹೇಳಿದರು.

ನೀರು ಪೂರೈಕೆ ಸಮರ್ಪಕವಾಗಿರಲಿ: ಬೇಸಿಗೆ ಸಮೀಪ ಬರುತ್ತಿದ್ದು ಗ್ರಾಪಂ ಪಿಡಿಒಗಳು ನೀರಿನ ಸಮಸ್ಯೆ ಇರುವ ಕಡೆ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನೀರಿನ ಸಮಸ್ಯೆ ಬಾರದಂತೆ ಕಾರ್ಯಕ್ರಮ ರೂಪಿಸಿ. ನೀರಿನ ಸಮಸ್ಯೆ ಬಂದಾಗ ಮಾತ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಪ್ರಯೋಜನವಾಗುವುದಿಲ್ಲ. ಮೊದಲೆ ಎಚ್ಚೆತ್ತುಕೊಂಡರೆ ಹೆಚ್ಚಿನ ಅನುದಾನ ತರಲು ಸಾಧ್ಯ. ಉತ್ತಮ ಮಳೆಯಾಗಿರುವುದರಿಂದ ಕೆರೆಯ ಆವರಣಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ದೊಡ್ಡ ಸೊಂಪು ನಿರ್ಮಾಣ ಮಾಡಿ ಗುರುತ್ವಾಕರ್ಷಣೆ ಮೂಲಕ ಪೈಪುಗಳ ಮೂಲಕ ನೀರನ್ನು ಹರಿಸಲು ಸಾಧ್ಯವಾಗುತ್ತದೆ. ದೇವನಹಳ್ಳಿ ಪಟ್ಟಣದಲ್ಲಿ ಪಾರಿವಾಳ ಗುಟ್ಟದ ಹತ್ತಿರ ದೊಡ್ಡ ಸೊಂಪು ನಿರ್ಮಾಣ ಮಾಡಿ ಗುರುತ್ವಾಕರ್ಷಣೆಯ ಮೂಲಕ ನೀರನ್ನು ನೀಡಲು ಯೋಜನೆ ರೂಪಿಸಬೇಕು. ವಿಜಯಪುರದಲ್ಲೂ ಸಹ ಕೆರೆಗಳ ಹತ್ತಿರ ಬೋರ್‌ವೆಲ್‌ಗ‌ಳನ್ನು ಕೊರೆಸುತ್ತೇನೆ. ಜಲಜೀವನ ಮಿಷನ್‌ನಲ್ಲಿ ನಲ್ಲಿಗಳ ಮೂಲಕ ನೀರು ನೀಡಲು ಯೋಜನೆ ರೂಪುಗೊಂಡಿದೆ ಎಂದು ಹೇಳಿದರು.

ಸಭೆಗೆ ಗೈರಾಗಿದ್ದವರಿಗೆ ನೋಟಿಸ್‌ ನೀಡಿ: ಅಬಕಾರಿ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಇನ್ನು ಯಾವ ಇಲಾಖೆ ಅಧಿಕಾರಿಗಳು ಕೆಡಿಪಿ ಸಭೆಗೆ ಗೈರಾಗಿದ್ದವರಿಗೆನೋಟಿಸ್‌ ನೀಡಬೇಕು. ಅಧಿಕಾರಿಗಳು ತಮಗೆ ಯಾವ ಯಾವ ಸಮಸ್ಯೆಗಳು ಇವೆ ಎಂದು ಹೇಳಿದರೆ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಮಾಡುತ್ತೇನೆ. ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಕಂಡುಕೊಳ್ಳಲುಸಹಕಾರಿಯಾಗುತ್ತದೆ. ಗಣಿಗಾರಿಕೆ ಬಾದಿತ ಅನುದಾನದಲ್ಲಿ ಶಾಲೆಗಳಿಗೆ ಅನುದಾನ ಕೊಡಿಸಬಹುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪೋಲೀಸ್‌ ಠಾಣೆಯಿಂದ ಹತ್ತು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದ್ದು, ಈ ಸಂಬಂಧ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ಹಿಂದುಳಿದ ವರ್ಗದ ಮೂರು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸರ್ಕಾರ ಜಾಗ ನೀಡಿದ್ದು, ಕಟ್ಟಡಗಳ ನಿರ್ಮಾಣಕ್ಕೆ ಅನುದಾನಕ್ಕೆ ಮಂಜೂರು ಮಾಡಬೇಕು. ಸರ್ಕಾರ ರಾಗಿ ಖರೀದಿ ಬಗ್ಗೆ ಮತ್ತೂಮ್ಮೆ ವಿಮರ್ಶಿಸಿ ರೈತರಿಗೆ ಅನುಕೂಲವಾಗುವ ನಿಲುವು ತಾಳಬೇಕೆಂದು ಆಗ್ರಹಿಸಿದರು.

ವಿಮಾನ ನಿಲ್ದಾಣದಲ್ಲೇ ಠಾಣೆ ಇದ್ದರೆ ಅನುಕೂಲ:

Advertisement

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್‌ ಪೆಕ್ಟರ್‌ ಮುತ್ತುರಾಜ್‌ ಮಾತನಾಡಿ, ಸುಮಾರು ಹತ್ತು ಹಳ್ಳಿಯ ಜನರಿಗೆ ವಿಮಾನ ನಿಲ್ದಾಣಕ್ಕೆ ಬರಲು ಕಷ್ಟವಾಗುತ್ತಿದೆ. ಬಸ್‌ ಸೌಲಭ್ಯ, ಹಾಗೂ ಇತರೆ ಸೌಲಭ್ಯಗಳು ಇಲ್ಲ. ವಿಮಾನ ನಿಲ್ದಾಣದಲ್ಲಿಯೇ ಪೋಲೀಸ್‌ ಠಾಣೆ ಇದ್ದರೆ ಅನುಕೂಲವಾಗುತ್ತದೆ. ಹಲವಾರು ಕೆಲಸಕಾರ್ಯಗಳು ಹೆಚ್ಚಿರುತ್ತದೆ. ಕನ್ನಮಂಗಲ ಹತ್ತಿರ ಔಟ್‌ ಪೊಲೀಸ್‌ ಠಾಣೆ ಮಾಡಿದ ರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ.ಶೇ.75ರಷ್ಟು ಪ್ರಕರಣಗಳು ವಿಮಾನ ನಿಲ್ದಾಣದಿಂದಬರಲಿದೆ. ಶೇ.40ರಷ್ಟು ಪ್ರಕರಣಗಳು ಗ್ರಾಮೀಣಪ್ರದೇಶಗಳಿಂದ ಬರಲಿದೆ ಎಂದು ಹೇಳಿದರು.

ನೀರು ಪೂರೈಕೆಗೆ ಬೋರ್‌ವೆಲ್‌: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಸೋಮಶೇಖರ್‌ ಮಾತನಾಡಿ, ತಾಲೂಕಿನಲ್ಲಿ ಎರಡು ಕಡೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆರು ಕಡೆಗಳಲ್ಲಿ ಖಾಸಗಿ ಬೋರ್‌ವೆಲ್‌ಗ‌ಳ ಮೂಲಕನೀರನ್ನು ನೀಡುತ್ತಿದ್ದೇವೆ. ಬೂದಿಗೆರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಬೋರ್‌ವೆಲ್‌ಗ‌ಳನ್ನು ಹಾಕಿಸಿ ನೀರನ್ನು ಒದಗಿಸಲಾಗುತ್ತಿದೆ. ಆದರೂ ಸಹ ಸಮಸ್ಯೆ ಬರುತ್ತಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ತಹಶೀಲ್ದಾರ್‌ ಶಿವರಾಜ್‌, ತಾಪಂಇಒ ಎಚ್‌.ಡಿ.ವಸಂತಕುಮಾರ್‌, ಕೆಡಿಪಿ ಸದಸ್ಯರಾದ ನಾಗವೇಣಿ, ಭಗವಾನ್‌, ಗೋವಿಂದರಾಜು, ಮುನಿಕೃಷ್ಣಪ್ಪ, ತಾಪಂ ಸಹಾಯಕ ನಿರ್ದೇಶಕ ಸುನಿಲ್‌, ತಾಲೂಕು ಮಟ್ಟದ ಅಧಿಕಾರಿಗಳು, ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next