Advertisement

Blast ಕೇಸ್, ಉಗ್ರ ಯಾಸಿನ್ ಭಟ್ಕಳನನ್ನು ಹಾಜರುಪಡಿಸಿ; ಕೋರ್ಟ್ ಆದೇಶ

06:35 PM Jan 17, 2017 | Team Udayavani |

ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಗ್ರ ಯಾಸಿನ್ ಭಟ್ಕಳನನ್ನು ಹಾಜರುಪಡಿಸುವಂತೆ 52ನೇ ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಆದೇಶ ನೀಡಿದೆ.

Advertisement

ಯಾಸಿನ್ ಭಟ್ಕಳ್ ಸದ್ಯ ಹೈದರಾಬಾದ್ ನ ಚೆರ್ಲಪಲ್ಲಿ ಜೈಲಿನಲ್ಲಿದ್ದು, ಹೈದರಾಬಾದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2010 ರ ಏಪ್ರಿಲ್ 4 ರಂದು ಗೇಟ್ ಸಂಖ್ಯೆ 11 ಮತ್ತು 15 ರ ಬಳಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹೀದಿನ್ ಸಂಘಟನೆಯ ಕೈವಾಡವಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದರು.

ಭಟ್ಕಳ್ ವಿರುದ್ಧ ಸಿ.ಸಿ.ಬಿ. ಬಾಡಿ ವಾರೆಂಟ್ ಹೊರಡಿಸಿ, ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಯಾಸಿನ್ ಭಟ್ಕಳ್ ನನ್ನು ಫೆಬ್ರವರಿ 4 ರಂದು ಹಾಜರುಪಡಿಸುವಂತೆ ಆದೇಶಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next