Advertisement

ಪ್ರಶಾಂತ್‌ ಪರಾಕ್ರಮ, ಯುಪಿ ಜಯ

06:05 AM Dec 07, 2018 | Team Udayavani |

ಹೊಸದಿಲ್ಲಿ: ರಾಜ್ಯದ ತಾರಾ ಕಬಡ್ಡಿ ಆಟಗಾರ ಪ್ರಶಾಂತ್‌ ಕುಮಾರ್‌ ರೈ (8 ಅಂಕ) ಅವರ ಸಾಹಸಮಯ ರೈಡಿಂಗ್‌ ನೆರವಿನಿಂದ ಪ್ರೊ ಕಬಡ್ಡಿ 6ನೇ ಆವೃತ್ತಿ ಹೊಸದಿಲ್ಲಿ ಚರಣದ ಗುರುವಾರದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ ವಿರುದ್ಧ ಯುಪಿ ಯೋಧಾ 30-29 ಅಂಕಗಳ ರೋಚಕ ಗೆಲುವು ಸಾಧಿಸಿದೆ.

Advertisement

“ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆದ ಪಂದ್ಯದಲ್ಲಿ ಯುಪಿ ಯೋಧ-ಹರ್ಯಾಣ ಸ್ಟೀಲರ್ ನಡುವೆ ಜಿದ್ದಾಜಿದ್ದಿ ಹಣಾಹಣಿ ನಡೆಯಿತು. ಕೊನೆಗೂ ಒಂದು ಅಂಕದಿಂದ ಯುಪಿ ಗೆಲುವು ಸಾಧಿಸಿತು. ತಂಡದ ಗೆಲುವಿನಲ್ಲಿ ಶ್ರೀಕಾಂತ್‌ ಜಾಧವ್‌ (8 ಅಂಕ) ರೈಡಿಂಗ್‌ನಿಂದ, ಆಲ್‌ರೌಂಡರ್‌ ಸಚಿನ್‌ ಕುಮಾರ್‌ (6 ಅಂಕ) ಹಾಗೂ ನಿತೀಶ್‌ ಕುಮಾರ್‌ (4 ಅಂಕ) ಟ್ಯಾಕಲ್‌ನಿಂದ ಗಮನ ಸೆಳೆದರು. ಹರ್ಯಾಣ ಪರ ಮೋನು ಗೋಯತ್‌ (11 ಅಂಕ) ಹಾಗೂ ವಿಕಾಸ್‌ (7 ಅಂಕ) ತಂಡ ಗೆಲ್ಲಿಸಲು ಪ್ರಯತ್ನ ನಡೆಸಿದರಾದರೂ ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next