Advertisement

ಟವೇರಾಗೆ ಕಂಟೇನರ್ ಡಿಕ್ಕಿ: ಇಬ್ಬರು ಕಬಡ್ಡಿ ಆಟಗಾರರ ದುರಂತ ಸಾವು

12:49 PM Mar 17, 2021 | Team Udayavani |

ವಿಜಯಪುರ: ಕಬಡ್ಡಿ ಕ್ರೀಡಾಪಟುಗಳಿದ್ದ ಟವೇರಾ ವಾಹನಕ್ಕೆ ಕಂಟೇನರ್ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ಇಬ್ಬರು ಕ್ರೀಡಾಪಟುಗಳು ದುರಂತ ಸಾವಿಗೀಡಾಗಿ, ಆರು ಜನರು ಗಂಭೀರ ಗಾಯಗೊಂಡ ದುರಂತ ಕೊಲ್ಹಾರ ಬಳಿ ಸಂಭವಿಸಿದೆ.

Advertisement

ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯ ರೋಣಿಹಾಳ ಕ್ರಾಸ್ ಬಳಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೃತರನ್ನು ಸೋಹೇಲ್ ಇಸ್ಮಾಯಿಲ್ (20)ಹಾಗೂ ಮಹಾದೇವ ಬಾಪು ಅವಟಿ (23) ಎಂದು ಗುರುತಿಸಲಾಗಿದೆ.

ರೋಣಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿ-218 ರ ಕ್ರಾಸ್ ಬಳಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇನ್ನೂ ಎಂಟು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:  6 ತಿಂಗಳಲ್ಲಿ ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ ಬೃಹತ್ ಸಮಾವೇಶ: ಜಯಮೃತ್ಯುಂಜಯ ಸ್ವಾಮೀಜಿ

Advertisement

ಮಹಾರಾಷ್ಟ್ರ ರಾಜ್ಯದ ಬಾರಾಮತಿಯಿಂದ ಬಾಗಲಕೋಟೆ ಜಿಲ್ಲೆಯ ತುಳಸಿಗಿರಿಗೆ ಪ್ರೋ ಕಬಡ್ಡಿ ಪಂದ್ಯಾವಳಿ ಆಯ್ಕೆಯಲ್ಲಿ ಪಾಲ್ಗೊಳ್ಳಲು ಟವೇರಾ ವಾಹನದಲ್ಲಿ ತೆರಳುತ್ತಿದ್ದರು. ಕ್ರೀಡಾಪಟುಗಳಿದ್ದ ವಾಹನ ರೋಣಿಹಾಳ ಕ್ರಾಸ್ ಬಳಿ ಬರುತ್ತಲೇ ಎದುರಿನಿಂದ ಬಂದ ಬ್ಯಾಡಗಿಯಿಂದ ದೆಹಲಿಗೆ ಹೊರಟಿದ್ದ ಕಂಟೇನರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಹಾವೇರಿ: ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಕೊಲ್ಹಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಲ್ಯಾಸ್ಟಿಕ್ ನೀತಿ ಬೆಂಬಲಿಸಿ : ಹ್ಯಾರಿಸ್ ಗೆ ಭಾರತಿಯ ಅಮೇರಿಕನ್ ಮಹಿಳಾ ಉದ್ಯಮಿಗಳ ಮನವಿ   

Advertisement

Udayavani is now on Telegram. Click here to join our channel and stay updated with the latest news.

Next