Advertisement

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಫೋಟೊ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

06:11 PM Oct 06, 2021 | Team Udayavani |

ಕುಂದಾಪುರ : ವಿಶ್ವ ಕುಂದಾಪುರ ಕನ್ನಡ ದಿನಾಚರಣೆ(ಆ.8) ಪ್ರಯುಕ್ತ ಉದಯವಾಣಿ ಡಾಟ್ ಕಾಮ್ ಕುಂದಾಪ್ರ ಕನ್ನಡ ಸೊಗಡು ಸಾರುವ ಚಿತ್ರಗಳ ಸ್ಪರ್ಧೆ ಏರ್ಪಡಿಸಿತ್ತು. ಇದಕ್ಕೆ ದೇಶ,ವಿದೇಶಗಳಿಂದ ಸಾವಿರಾರು ಫೋಟೊಗಳು ಬಂದಿದ್ದವು. ಇದರಲ್ಲಿ ಆಯ್ದ ಮೂರು ಚಿತ್ರಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು. ಕುಂದಾಪುರದ ಪ್ರಸಿಸ್ಧ ಉದಯ ಜ್ಯುವೆಲ್ಲರ್ಸ್ ಸಹಭಾಗಿತ್ವದಲ್ಲಿ ಇಂದು ಬಹುಮಾನ ವಿಜೇತರಿಗೆ ಉದಯ ಜ್ಯುವೆಲ್ಲರ್ಸ್ ಮಾಲೀಕರಾದ ಉದಯ್ ಕುಮಾರ್ ಶೇಟ್ ಬಹುಮಾನ ನೀಡಿದರು.

Advertisement

ಪ್ರಥಮ ಬಹುಮಾನ (5ಸಾವಿರ)ಪಡೆದ ಪ್ರೀತಮ್ ನೆಲ್ಲಿಕಟ್ಟೆ, ಎರಡನೇ ಬಹುಮಾನ ಸಪ್ತಮಿ ದೇವಾಡಿಗ, ಮೂರನೇ ಬಹುಮಾನ ಪಡೆದ ಮಂಜುನಾಥ್ ಶೆಟ್ಟಿ ಹೊಂಬಾಡಿಗೆ ಬಹುಮಾನ ವಿತರಿಸಲಾಯ್ತು. ಈ ಸಂದರ್ಭದಲ್ಲಿ ಉದಯ್ ಜ್ಯುವೆಲ್ಲರ್ಸ್ ಮಾಲೀಕರಾದ ಉದಯ್ ಕುಮಾರ್ ಶೇಟ್, ಅಕ್ಷಯ್ ಶೇಟ್, ಅಜಯ್ ಶೇಟ್, ಉದಯವಾಣಿ ಡಾಟ್ ಕಾಮ್ ನ ಕೋ ಆರ್ಡಿನೇಟರ್ ಅವಿನಾಶ್ ಕಾಮತ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next