Advertisement

ವಿಕಲ ಚೇತನರಿಗೆ ಉದ್ಯೋಗ ಅವಕಾಶ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಭರವಸೆ

06:15 AM Aug 03, 2017 | Team Udayavani |

ಉಡುಪಿ: ವಿಕಲ ಚೇತನ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅವರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement

ಅವರು ಆ. 2ರಂದು ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಎಂಜಿನಿಯರ್ ಇಂಡಿಯಾ ಲಿಮಿಟೆಡ್‌ ಅವರ ಸಿಎಸ್‌ಆರ್‌ ಯೋಜನೆಯಡಿ ಅಲಿಮೊRà ಬೆಂಗಳೂರು, ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಇವರ ಸಹಕಾರದೊಂದಿಗೆ ಜಿಲ್ಲೆಯ ಅರ್ಹ 371 ಸಂತ್ರಸ್ತರಿಗೆ  40 ಲಕ್ಷ ರೂಪಾಯಿ ಮೌಲದ್ಯ ವಿವಿಧ ಸಲಕರಣೆಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬದುಕಿಗೆ ಬಹುದೊಡ್ಡ ಆಶಾಕಿರಣ
ವಿಕಲಚೇತನರಿಗಾಗಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವ ವೆಲ್ಲೂರು ಶ್ರೀನಿವಾಸ್‌ ಅವರು ಹೊಸ ಯೋಜನೆಯೊಂದನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ವಿಂಗಡಿಸಲು ಅಗಾಧವಾದ ಮಾನವ ಸಂಪನ್ಮೂಲದ ಅಗತ್ಯವಿದ್ದು, ಅದಕ್ಕೆ ವಿಕಲಚೇತನರನ್ನು ಉಪಯೋಗಿಸಿಕೊಳ್ಳುವ ಇರಾದೆ ಇದೆ. ಕುಳಿತಲ್ಲಿಯೇ ಸುಲಭವಾಗಿ ಕೆಲಸ ಮಾಡಬಹುದಾದ ಈ ಉದ್ಯೋಗ ವಿಕಲಚೇತನರ ಬದುಕಿಗೆ ಬಹುದೊಡ್ಡ ಆಶಾಕಿರಣವಾಗಲಿದೆ. ಉದ್ಯೋಗದಲ್ಲಿ ಆಸಕ್ತಿ ಇರುವ ವಿಕಲಚೇತನರು ಅರ್ಜಿಯನ್ನು ಸಲ್ಲಿಸಬೇಕೆಂದು ಎಂದು ಅವರು ಹೇಳಿದರು.

ಅಲಿಮೊRàದ ಘಟಕದ ಮುಖ್ಯಸ್ಥ ಅನುಪಮ್‌ ಪ್ರಕಾಶ್‌ ಶಿಖರೋಪನ್ಯಾಸ ನೀಡಿದರು. ಇಐಎಲ್‌ನ ವಿಜಯ ಶಾಸಿŒ, ಕೆ. ಸ್ವಾಮಿನಾಥನ್‌, ಐಆರ್‌ಸಿಎಸ್‌ ರಾಜ್ಯ ಸಭಾಪತಿ ಬಸೂÅರು ರಾಜೀವ ಶೆಟ್ಟಿ, ಉಡುಪಿ ಘಟಕದ ಸಭಾಪತಿ ಡಾ| ಉಮೇಶ್‌ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಐಆರ್‌ಸಿಎಸ್‌ ಉಡುಪಿ ಘಟಕದ ಜತೆ ಕಾರ್ಯದರ್ಶಿ ಜಿ.ಸಿ. ಜನಾರ್ದನ್‌ ಸ್ವಾಗತಿಸಿ, ಡಿಡಿಡಬ್ಲೂಒನ ನಿರಂಜನ ಭಟ್‌ ವಂದಿಸಿದರು. ಡಿಡಿಆರ್‌ಸಿಯ ಸಂಯೋಜಕ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next