Advertisement

ಸಿಕ್ಕಿಂ ಕುರಿತ ಹೇಳಿಕೆ: ಕ್ಷಮೆ ಕೋರಿದ ಪ್ರಿಯಾಂಕಾ ಚೋಪ್ರಾ

03:42 PM Sep 15, 2017 | udayavani editorial |

ಮುಂಬಯಿ : ಸಿಕ್ಕಿ ಬಂಡುಕೋರರ ಹಿಂಸೆಯಿಂದ ಪೀಡಿತವಾಗಿರುವ ರಾಜ್ಯವಾಗಿದೆ  ಎಂಬ ತನ್ನ ತಪ್ಪು ಹೇಳಿಕೆಯಿಂದ ಸಿಕ್ಕಿಂ ಜನರ ಭಾವನೆಗಳು ಹಾಗೂ ಘನತೆಗೆ ನೋವುಂಟಾಗಿರುವುದಕ್ಕೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೋರಿದ್ದಾರೆ.

Advertisement

ವಸ್ತು ಸ್ಥಿತಿಯ ತಿಳಿವಳಿಕೆಯೇ ಇಲ್ಲದೇ ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಪ್ರಿಯಾಂಕಾ ಕ್ಷಮೆ ಕೋರಬೇಕೆಂದು ರಾಜ್ಯ ಸರಕಾರ ಆಗ್ರಹಿಸಿತ್ತಾರೆ ಸಾಮಾಜಿಕ ಜಾಲ ತಾಣ ಬಳಕೆದಾರರು ಚೋಪ್ರಾ ರಾಜಕೀಯವಾಗಿ ನಿರಕ್ಷರಳೆಂದು ಟೀಕಿಸಿದ್ದರು. 

“ಪಹೂನಾ’ ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಚೋಪ್ರಾ “ಬಂಡುಕೋರರಿಂದ ಹಿಂಸಾತ್ರಸ್ತವಾಗಿರುವ ಸಿಕ್ಕಿಂನಿಂದ ಬಂದಿರುವ ಮೊದಲ ಚಿತ್ರ ಇದಾಗಿದೆ’ ಎಂದು  ಟೊರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೇಳಿದ್ದರು. 

“ಸಿಕ್ಕಿಂ ಶಾಂತಿಯುತ, ಹಸಿರು ಸಮೃದ್ಧ, ಶಾಂತಿಪ್ರಿಯ ಜನರಿಂದ ಕೂಡಿದ ರಾಜ್ಯವಾಗಿದೆ; ನನ್ನ ಹೇಳಿಕೆಯಿಂದ ಸಿಕ್ಕಿಂ ಜನರಿಗೆ ನೋವುಂಟಾಗಿದೆ ಎಂದು ನಾನು ಬಲ್ಲೆ; ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next