Advertisement

ಮೊದಲು ಸ್ಕೆಚ್‌ ನಂತರ ಫೋಟೋಶೂಟ್‌ ಕುರುಕ್ಷೇತ್ರಕ್ಕೆ ಭರ್ಜರಿ ತಯಾರಿ

10:51 AM Jul 31, 2017 | Team Udayavani |

“ಕುರುಕ್ಷೇತ್ರ’ ಚಿತ್ರದ ತಯಾರಿ ಜೋರಾಗಿ ನಡೆಯುತ್ತಿದೆ. ಆಗಸ್ಟ್‌ 6 ರಂದು ಅದ್ಧೂರಿಯಾಗಿ ಚಿತ್ರದ ಮುಹೂರ್ತ ನಡೆಯಲಿದೆ. ಈಗಾಗಲೇ ಚಿತ್ರದ ಬಹುತೇಕ ತಾರಾಬಳಗದ ಆಯ್ಕೆ ನಡೆದಿದ್ದು, ಟೆಸ್ಟ್‌ಶೂಟ್‌ ಕೂಡಾ ನಡೆದಿದೆ. ಎಲ್ಲರಿಗಿರುವ ಕುತೂಹಲ ಒಂದೇ, ಅದೇನೆಂದರೆ ಯಾವ ರೀತಿ ಫೋಟೋಶೂಟ್‌ ನಡೆಯುತ್ತದೆ, ಆಯಾ ಪಾತ್ರಗಳಲ್ಲಿ ಕಲಾವಿದರು ಹೇಗೆ ಕಾಣುತ್ತಾರೆಂಬುದು. ಹೈದರಾಬಾದ್‌ನಲ್ಲಿ ಫೋಟೋಶೂಟ್‌ ನಡೆಯುತ್ತಿದ್ದು, ಕಲಾವಿದರು ಗೆಟಪ್‌ನ ಒಂದು ಸ್ಯಾಂಪಲ್‌ ಇಲ್ಲಿದೆ. ಇಲ್ಲಿರುವ ಚಿತ್ರ ನಿಖೀಲ್‌ ಕುಮಾರ್‌ ಅವರದು.

Advertisement

“ಕುರುಕ್ಷೇತ್ರ’ದಲ್ಲಿ ನಿಖೀಲ್‌ ಅಭಿಮನ್ಯು ಪಾತ್ರ ಮಾಡುತ್ತಿದ್ದು, ಈಗಾಗಲೇ ನಿಖೀಲ್‌ ಟೆಸ್ಟ್‌ಶೂಟ್‌ ನಡೆದಿದೆ. ಆ ಟೆಸ್ಟ್‌ಶೂಟ್‌ನಲ್ಲಿ, ಅಭಿಮನ್ಯು ಗೆಟಪ್‌ನಲ್ಲಿ ನಿಖೀಲ್‌ ಹೇಗೆ ಕಾಣಿಸಿಕೊಂಡಿದ್ದಾರೆಂಬುದನ್ನು ಈ ಸ್ಕೆಚ್‌ ಮೂಲಕ ನೋಡಬಹುದು. “ಕುರುಕ್ಷೇತ್ರ’ ಚಿತ್ರದ ಟೆಸ್ಟ್‌ಶೂಟ್‌ ತುಂಬಾ ಕ್ರಮಬದ್ಧವಾಗಿ ನಡೆಯುತ್ತಿದ್ದು, ಏಕಾಏಕಿ ಕಲಾವಿದರಿಗೆ ಕಾಸ್ಟೂéಮ್‌ ತೊಡಿಸಿ ಫೋಟೋಶೂಟ್‌ ಮಾಡುತ್ತಿಲ್ಲ. ಬದಲಾಗಿ ಆಯಾ ಪಾತ್ರವನ್ನು ಕಲ್ಪಿಸಿಕೊಂಡು, ಮೊದಲು ಆ ಪಾತ್ರವನ್ನು ಸ್ಕೆಚ್‌ ಮಾಡಲಾಗುತ್ತದೆ.

ಈ ಸ್ಕೆಚ್‌ನಲ್ಲಿ ಸಣ್ಣ ಸಣ್ಣ ಅಂಶಗಳನ್ನು ಕೂಡಾ ಗಮನಿಸಿ, ಅದಕ್ಕೆ ಸರಿಯಾಗಿ ಕಾಸ್ಟೂéಮ್‌ ರೆಡಿಮಾಡಲಾಗುತ್ತದೆ. ಆ ನಂತರ ಚಿತ್ರದ ಟೆಸ್ಟ್‌ಶೂಟ್‌ ಮಾಡಲಾಗುತ್ತಿದೆ. ನಿರ್ದೇಶಕ ನಾಗಣ್ಣ ಸದ್ಯ ಹೈದರಾಬಾದ್‌ನಲ್ಲಿ ಟೆಸ್ಟ್‌ಶೂಟ್‌ನಲ್ಲಿ ಬಿಝಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಹೈದರಾನಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದ್ದು, ಅದಕ್ಕಾಗಿ ವಿಶೇಷ ಸೆಟ್‌ ಹಾಕಲಾಗುತ್ತಿದೆ. ಈಗಾಗಲೇ ಸೆಟ್‌ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರದ ಅದ್ಧೂರಿತನವನ್ನು ಬಿಂಬಿಸುವಂತಿವೆಯಂತೆ.

 ಚಿತ್ರದಲ್ಲಿ ದರ್ಶನ್‌ ದುರ್ಯೋಧನ ಪಾತ್ರ ಮಾಡುತ್ತಿದ್ದು, ಈಗಾಗಲೇ ಅವರ ಟೆಸ್ಟ್‌ಶೂಟ್‌ ಆಗಿದೆ. ಹಿರಿಯ ನಟ ಶ್ರೀನಾಥ್‌ “ಕುರುಕ್ಷೇತ್ರ’ ಚಿತ್ರದಲ್ಲಿ ಧೃತರಾಷ್ಟ್ರ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಶ್ರೀಕೃಷ್ಣ , ಹಿರಿಯ ನಟರಾದ ಅಂಬರೀಶ್‌ ಅವರು ಭೀಷ್ಮಾಚಾರ್ಯ, ಶ್ರೀನಿವಾಸ ಮೂರ್ತಿಗಳು ದ್ರೋಣಾಚಾರ್ಯ, ಅವಿನಾಶ್‌ ಅವರು ಗಾಂಧರ್ವ ರಾಜನಾಗಿ ನಟಿಸುತ್ತಿದ್ದಾರೆ. “ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರವನ್ನು ಬಹುಭಾಷಾ ನಟಿ ಸ್ನೇಹಾ ಮಾಡುತ್ತಿದ್ದಾರೆ.

ನಿಖೀಲ್‌ ಕುಮಾರ್‌ ಅಭಿಮನ್ಯುವಾಗಿ ನಟಿಸಿದರೆ, ಚಿತ್ರದಲ್ಲಿ ಸಾಯಿಕುಮಾರ್‌ ಶಕುನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಕೂಡಾ ನಟಿಸುತ್ತಿದ್ದು, ಅವರಿಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ರೆಜಿನಾ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕರ್ಣನ ಪಾತ್ರದಲ್ಲಿ ತೆಲುಗು ನಟ ಶ್ರೀಕಾಂತ್‌ ಕಾಣಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಈ ಚಿತ್ರವನ್ನು ಮುನಿರತ್ನ ಅವರು ನಿರ್ಮಿಸುತ್ತಿದ್ದು, ಇದೊಂದು ಬಿಗ್‌ ಬಜೆಟ್‌ನ ಚಿತ್ರವಾಗಿದೆ.

Advertisement

ಜಯನನ್‌ ವಿನ್ಸೆಂಟ್‌ ಛಾಯಾಗ್ರಹಣ, “ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 30 ರಂದು ಚಿತ್ರದ ಮುಹೂರ್ತ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿದ್ದು, ಆಗಸ್ಟ್‌ 6 ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next