Advertisement

ಜಮೀರ್‌ ಅಹಮದ್‌ ಗುಣಮುಖರಾಗಲು ಪ್ರಾರ್ಥನೆ

01:43 PM Aug 24, 2020 | Suhan S |

ಶಿಡ್ಲಘಟ್ಟ: ಚಾಮರಾಜಪೇಟೆ ಶಾಸಕ ಬಿ.ಝೆಡ್‌. ಜಮೀರ್‌ ಅಹಮದ್‌ ಖಾನ್‌ ಕೋವಿಡ್ ಸೋಂಕಿನಿಂದ ಗುಣಮುಖರಾಗಲು ನಗರದ ಕಾಂಗ್ರೆಸ್‌ ಕಾರ್ಯಕರ್ತರು ದರ್ಗಾ ಮತ್ತು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಮೈನಾರಿಟಿ ಘಟಕದ ಅಧ್ಯಕ್ಷ ಅಮಜದ್‌ ನವಾಝ್ ನೇತƒತ್ವದಲ್ಲಿ ಮುಸ್ಲಿಂ ಯುವಕರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿರುವ ಹಝರತ್‌ ಹುಸೇನಿ ಸರಮಸ್ತ್ ಷಾ ವಲೀ ದರ್ಗಾ ಹಾಗೂ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಶಾಸಕ ಜಮೀರ್‌ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣ ಮುಖರಾಗಿ ಎಂದಿನಂತೆ ಜನಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಮೊದಲಿಗೆ ದರ್ಗಾದಲ್ಲಿ ಧರ್ಮಗುರುಗಳಾದ ಆದಮ್‌ ಅಲಿ ಅವರಿಂದ ಫಾತೇಹಾ ಕಾರ್ಯಕ್ರಮ ಮುಗಿಸಿದ ಕಾರ್ಯಕರ್ತರು, ಬಳಿಕ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೋಮು ಸೌರ್ಹಾದತೆ ಮೆರೆದರು.

ಹಝರತ್‌ ಹುಸೇನಿ ಸರಮಸ್ತ್ ಷಾ ವಲಿ ದರ್ಗಾ ಸಮಿತಿಯ ಶಫಿಉಲ್ಲಾ, ಕಾಂಗ್ರೆಸ್‌ ಹಿರಿಯ ಮುಖಂಡ ಅಲಹಾಜ್‌ ಸೆ„ಯದ್‌ ಯೂಸುಫ್‌, ತಾಲೂಕು ರೀಲರ್ ಅಸೋಸಿಯೇಷನ್‌ ಅಧ್ಯಕ್ಷ ಅನ್ಸರ್‌ಖಾನ್‌, ಮೆಕಾನಿಕ್‌ ಯೂಸುಫ್‌, ಪಿಓಪಿ ಸಗೀರ್‌, ಮುಖಂಡರಾದ ರಾಜಕುಮಾರ್‌,ವಿಜಿ, ನಗರಸಭಾ ಸದಸ್ಯರಾದ ರಿಯಾಝ್ಪಾಷ, ಝಬೀಉಲ್ಲಾ, ಅನಿಲ್‌ಕುಮಾರ್‌, ಶಬ್ಬೀರ್‌, ಮನೋಹರ್‌, ಮುಜಾಹೀದ್‌ಪಾಷ, ಅಕ್ರಮ್‌ ಪಾಷ, ಮೆಡಿಕಲ್‌ ಅಲೀಂ, ಕಲೀಂ, ಸಾಧಿಕ್‌ಪಾಷ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next