Advertisement

ಅಕ್ರಮ ಪಡಿತರ ಸಾಗಾಣಿಕೆ ತಡೆಯಿರಿ

02:44 PM Dec 09, 2021 | Team Udayavani |

ಮಾನ್ವಿ: ತಾಲೂಕಿನಲ್ಲಿ ನಡೆಯುತ್ತಿರುವ ವ್ಯಾಪಕ ಅಕ್ರಮ ಪಡಿತರ ಆಹಾರ ಸಾಗಾಣಿಕೆ ತಡೆಯುವಂತೆ ಆಗ್ರಹಿಸಿ ಕೆಆರ್‌ಎಸ್‌ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್‌. ಪೂಜಾರ ಒತ್ತಾಯಿಸಿದರು.

Advertisement

ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರೈತ ಸಂಘ ವತಿಯಿಂದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲಾಡಳಿತಕ್ಕೆ ಕಳೆದ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದರೂ ಅಕ್ರಮ ಪಡಿತರ ಆಹಾರ ಸಾಗಾಣಿಕೆದಾರರ ಮೇಲೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ವಿಫಲವಾಗಿದೆ.

ಅಕ್ರಮ ಪಡಿತರ ಅಕ್ಕಿಯನ್ನು ಸಾಗಣಿಕೆ ದಂಧೆ ನಡೆಸುತ್ತಿರುವ ಪ್ರಭಾವಿ ವ್ಯಕ್ತಿಯನ್ನು ಬಂಧಿಸಬೇಕು ಹಾಗೂ ಅವರ ಕುಟುಂಬದ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಅಂಬಣ್ಣ ಅರೋಲಿಕರ್‌ ಹಾಗೂ ಕೊಡಗಿನ ರೈತ ಹೋರಾಟಗಾರ ನಿರ್ವಾಣಪ್ಪ, ರೈತ ಸಂಘ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪ ಶ್ರೀನಿವಾಸ ನಾಯಕ್‌, ರಾಘವೇಂದ್ರ, ರಾಜಪ್ಪ ಸಿರವಾರ್‌ಕರ್‌, ಜಯಪ್ಪ ಬಸವರಾಜ ನಕ್ಕುಂದಿ, ಅಶೋಕ ನಿಲೋಗಲ್‌, ಜೆ.ಅಬ್ರಾಹಂ, ಮಾರೇಶ, ಪ್ರಸಾದ, ಯಲ್ಲಪ್ಪ, ಶಿವಪ್ಪ, ಶಿವು, ಯಲ್ಲಪ್ಪ ಬಾದರದಿನ್ನಿ, ವೀರೇಶ, ಸಿದ್ದಪ್ಪ, ಗಣೇಶ, ಪರಶುರಾಮ, ವಿನಯ, ಹನುಮಂತ, ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next