Advertisement

ದೇವೇಗೌಡರ ಸ್ಪರ್ಧೆಗೆ ಒತ್ತಡ

06:45 AM May 27, 2020 | Lakshmi GovindaRaj |

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ನ ಚುನಾವಣೆ ಬಗ್ಗೆ ಜೆಡಿಎಸ್‌ ನಲ್ಲಿಯೂ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಸಭೆ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇ ಗೌಡರ ಮೇಲೆ ಶಾಸಕರು, ವಿಧಾನ ಪರಿಷತ್‌  ಸದಸ್ಯರು ಒತ್ತಡ ಹಾಕುತ್ತಿದ್ದಾರೆ.

Advertisement

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಸ್ಪರ್ಧೆ ಮಾಡುವ ಸಾಧ್ಯತೆ ಇದ್ದು ಕಾಂಗ್ರೆಸ್‌ನ ಹೆಚ್ಚುವರಿ ಮತ ಬೆಂಬಲದ ಭರವಸೆ ದೊರೆತರೆ ನೀವು  ಜೆಡಿಎಸ್‌ನಿಂದ ಸ್ಪರ್ಧಿಸಿ ಎಂದು ಗೌಡರಿಗೆ ಎಚ್‌ .ಡಿ.ಕುಮಾರಸ್ವಾಮಿ ಮೂಲ ಕವೂ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗಿದೆ. 3-4 ದಿನಗಳಿಂದ ದೇವೇಗೌಡರನ್ನು ಭೇಟಿ ಮಾಡುತ್ತಿರುವ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮುಖಂಡರು ರಾಜ್ಯಸಭೆ ಚುನಾವಣೆಗೆ ನೀವು ಸ್ಪರ್ಧೆ ಮಾಡಿ ರಾಷ್ಟ್ರವ್ಯಾಪಿ ಜನಪರ ವಿಚಾರಗಳ ಹೋರಾಟಕ್ಕೆ ವೇದಿಕೆ ಸಿಗುತ್ತದೆ ಎಂದು ಹೇಳುತ್ತಿದ್ದಾರೆ.

ಆದರೆ, ದೇವೇಗೌಡರು ಆ ಕುರಿತು ಏನೂ ಹೇಳುತ್ತಿಲ್ಲ ಎಂದು ಹೇಳಲಾಗಿದೆ.ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹುಟ್ಟುಹಬ್ಬಕ್ಕೆ ಶುಭ ಕೋರಲು ತೆರಳಿದ್ದ ವೇಳೆ ಈ ವಿಚಾರ ಪ್ರಸ್ತಾಪಕ್ಕೆ ಬಂದು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ದೇವೇಗೌಡರು ರಾಜ್ಯಸಭೆಗೆ ಹೋದರೆ ಪ್ರಸ್ತುತ ಜೆಡಿಎಸ್‌ ರಾಜ್ಯಸಭೆ  ಸದಸ್ಯರಾಗಿರುವ ಕುಪೇಂದ್ರರೆಡ್ಡಿ ಅವರು ವಿಧಾನಪರಿಷತ್‌ಗೆ ಆಯ್ಕೆಯಾಗಬಹುದು.

ನಿವೃತ್ತಿಯಾಗಲಿರುವ ಟಿ.ಎ.ಶರವಣ ಸಹ 2ನೇ ಬಾರಿ ಆಯ್ಕೆಗೆ ಆಕಾಂಕ್ಷಿ ಆಗಿದ್ದಾರೆ. ಜತೆಗೆ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಮತ್ತಷ್ಟು  ನಾಯಕರು ಪರಿಷತ್‌ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆಂದು ಹೇಳಲಾ ಗಿದೆ. ವಿಧಾನ ಪರಿಷತ್‌ಗೆ ಓರ್ವ ಸದಸ್ಯ ಗೆಲ್ಲಲು 28 ಮತ, ರಾಜ್ಯ ಸಭೆಗೆ 45 ಮತ ಅಗತ್ಯವಿದೆ. ಜೆಡಿಎಸ್‌ 34, ಕಾಂಗ್ರೆಸ್‌ 66 ಮತ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next