Advertisement

ರಾಷ್ಟ್ರಪತಿ ಚುನಾವಣೆ 2022: ಎನ್ ಡಿಎ ಅಭ್ಯರ್ಥಿ ದ್ರೌಪದಿಗೆ ಶಿವಸೇನಾ ಬೆಂಬಲ: ಉದ್ಧವ್

03:48 PM Jul 12, 2022 | Team Udayavani |

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಶಿವಸೇನಾದ ಹಲವು ಸಂಸದರು ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದ ಬಳಿಕ ಉದ್ಧವ್ ಮಂಗಳವಾರ (ಜುಲೈ 12) ಮುರ್ಮುಗೆ ಬೆಂಬಲ ನೀಡುವ ಬಗ್ಗೆ ಒಲವು ತೋರಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ದಿಯೋಗಢ್ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ; ಪಾಟ್ನಾ, ಕೋಲ್ಕತಾ To ದೆಹಲಿ

ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಹೊರತಾಗಿಯೂ ಉದ್ಧವ್ ಠಾಕ್ರೆ, ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ ಇದರ ಅರ್ಥ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ ಎಂಬುದಲ್ಲ ಎಂದು ಠಾಕ್ರೆ ತಿಳಿಸಿದ್ದಾರೆ.

“ಶಿವಸೇನಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದೆಯೋ ಅದು ಸರಿಯಾಗಿದೆ. ಈ ಹಿಂದೆಯೂ ಕೂಡಾ ನಾವು ಕಾಂಗ್ರೆಸ್ ಬೆಂಬಲಿತ ಟಿಎನ್ ಶೇಷನ್ ಮತ್ತು ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿಯನ್ನು ಬೆಂಲಿಸಿದ್ದೇವೆ.  ಶಿವಸೇನಾಕ್ಕೆ ರಾಜಕೀಯದ ಹೊರತಾದ ಸಂಪ್ರದಾಯವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next