Advertisement

ಸುಸ್ತಿದಾರರು ಬಿಡ್‌ ಮಾಡುವಂತಿಲ್ಲ

07:15 AM Nov 24, 2017 | Team Udayavani |

ಹೊಸದಿಲ್ಲಿ: ಬ್ಯಾಂಕ್‌ಗಳಲ್ಲಿ ಮರುಪಾವತಿಯಾಗದ ಸಾಲ ಹೊಂದಿದ್ದು, ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿತರಾದವರು ದಿವಾಳಿ ಕಾಯ್ದೆಯಡಿ ಸ್ವತ್ತು ಖರೀದಿಗೆ ಬಿಡ್‌ ಮಾಡುವಂತಿಲ್ಲ ಎಂದು ಘೋಷಿಸಲಾಗಿದೆ. ಈ ಸಂಬಂಧ ದಿವಾಳಿ ಕಾನೂನು 2016ಕ್ಕೆ ತಿದ್ದುಪಡಿ ತರುವ ಅಧ್ಯಾದೇಶಕ್ಕೆ ರಾಷ್ಟ್ರಪತಿ ಕೋವಿಂದ್‌ ಸಹಿ ಹಾಕಿದ್ದಾರೆ. 

Advertisement

ಕಾಯ್ದೆಯ ಉದ್ದೇಶವನ್ನು ಸುಸ್ತಿದಾರರು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಈ ತಿದ್ದುಪಡಿ ಮಾಡಲಾಗಿದೆ. ಇನ್ನೊಂದೆಡೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಪುನಃ ಮಂಡಿಸುವುದಾಗಿ ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next