Advertisement

ಬಂಟ್ವಾಳ ಡಿವೈಎಸ್ ಪಿ ಪ್ರತಾಪ್ ಅವರಿಗೆ ರಾಷ್ಟ್ರಪತಿ ಪದಕ ಗೌರವ

06:22 PM Aug 14, 2022 | Team Udayavani |

ಬಂಟ್ವಾಳ:  ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ 2022 ರ ರಾಷ್ಟ್ರಪತಿ ಪದಕವನ್ನು ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಥೋರಾಟ್ ಅವರಿಗೆ ನೀಡಲಾಗಿದೆ.

Advertisement

ಸೆಂಟ್ರಲ್ ಕ್ರೈಂ ಬ್ರಾಂಚ್ ನ ಸಂಘಟಿತ ಅಪರಾಧ ದಳ ಬೆಂಗಳೂರಿನಲ್ಲಿ ಸುಮಾರು 6 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ಇವರು ಅನೇಕ ಪ್ರಕರಣಗಳನ್ನು ಛೇದಿಸುವ ಮೂಲಕ ಇಲಾಖೆಯ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೊತೆಗೆ ಇಂಟರನಲ್ ಸೆಕ್ಯುರಿಟಿ ಡಿವಿಷನ್ ವಿಂಗ್ ನಲ್ಲಿ ಕೂಡ ಇವರು ಸೇವೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ  ಮಾಡಿದ ಉನ್ನತ ಸೇವೆಗಾಗಿ ಇವರಿಗೆ 2022 ರ  ರಾಷ್ಟ್ರಪತಿ ಪದಕವನ್ನು ನೀಡಲಾಗುತ್ತಿದೆ.

ಪದಕವನ್ನು ಬೆಂಗಳೂರಿನಲ್ಲಿ ಅಥವಾ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.  ದಿನ ನಿಗದಿ ಇನ್ನಷ್ಟೇ ಆಗಬೇಕಾಗಿದೆ.

ಪ್ರಸ್ತುತ ಬಂಟ್ವಾಳ ಸಬ್ ಡಿವಿಜನ್ ನಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next