Advertisement

ಹಳ್ಳೂರಲ್ಲಿ ಪೂರ್ವಸಿದ್ಧತಾ ಸಭೆ

04:01 PM Jun 16, 2020 | Suhan S |

ಹಳ್ಳೂರ: ಶಿಕ್ಷಣ ತಜ್ಞರ ಅಭಿಪ್ರಾಯ ಹಾಗೂ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ದೃಷ್ಟಿಯಿಂದ ಎಸ್‌ಎಸ್‌ ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಜೆ.ಜೆ. ಭಸ್ಮೆ ಹೇಳಿದರು.

Advertisement

ಸಮೀಪದ ಶಿವಾಪುರ(ಹ) ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್‌ ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ದತಾ ಸಭೆ ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು, ಶಿಕ್ಷಕರು ಪರೀಕ್ಷೆ ನಡೆಸಲು ಎಲ್ಲ ತೆರನಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕೋವಿಡ್ ಗೆ ವಿದ್ಯಾರ್ಥಿಗಳು, ಪಾಲಕರು ಭಯ ಪಡಬಾರದು. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಿ ಜೂ. 25ರಿಂದ ಪರೀಕ್ಷೆ ನಡೆಯಲಿವೆ ಎಂದರು. ಸಿಆರ್‌ಸಿ ಎಸ್‌.ಬಿ. ಪಾಟೀಲ ಸೇರಿದಂತೆ ಪಾಲಕರು, ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next